ಪರೀಕ್ಷಾ ಕೇಂದ್ರದಲ್ಲಿ ಬರೋಬ್ಬರಿ 200 ಕೆಜಿ ನಕಲು ಚೀಟಿ ವಶ!

ಅಹಮದಬಾದ್: ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿದ್ದ ಕೇಂದ್ರದ ಮೇಲೆ ಅಧಿಕಾರಿಗಳು ನಡೆಸಿದ ವೇಳೆ ಸುಮಾರು 200 ಕೆಜಿ ತೂಕದ ನಕಲು ಚೀಟಿಗಳನ್ನು ವಶ ಪಡಿಸಿಕೊಂಡಿರುವ ಘಟನೆ ಜುನಾಗಢ್ ನ ವಂಥಾಲಿ ನಗರದಲ್ಲಿ ನಡೆದಿದೆ.

ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಸ್ವಾಮಿ ನಾರಾಯಣ ಗುರುಕುಲ ಪರೀಕ್ಷಾ ಕೇಂದ್ರದ 15 ವಿದ್ಯಾರ್ಥಿಗಳನ್ನು ಅಮಾನತು ಮಾಡಿದ್ದು, ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಸಹಕಾರ ನೀಡಿದ್ದ ಕಾರಣ ಕೆಲ ಪರೀಕ್ಷಾ ಕೇಂದ್ರದ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೇ ಮಾರ್ಚ್ 31 ರವರೆಗೂ ಪರೀಕ್ಷೆಗಳು ನಡೆಯಲಿದ್ದು, ನಕಲು ಮಾಡುವುದನ್ನು ತಡೆಯಲು ಅಗತ್ಯ ಕ್ರಮಕೈಗೊಂಡಿದ್ದಾಗಿ ಮಾಹಿತಿ ನೀಡಿದ್ದಾರೆ.

ಕಳೆದ ತಿಂಗಳು ನಡೆದ 10ನೇ ತರಗತಿಯ ಪರೀಕ್ಷೆ ವೇಳೆ ಇದೇ ಪರೀಕ್ಷಾ ಕೇಂದ್ರ ಬಳಿ ವಿದ್ಯಾರ್ಥಿಗಳು ನಕಲು ಚೀಟಿಗಳನ್ನು ಬಳಕೆ ಮಾಡಿದ್ದರು. ಶಾಲೆಯ ಮುಂಭಾಗದ ರಸ್ತೆಯಲ್ಲಿ ಪರೀಕ್ಷೆ ನಡೆದ ಬಳಿಕ ಅವುಗಳನ್ನು ಎಸೆಯಲಾಗಿತ್ತು. ಮೈಕ್ರೋ ಜೆರಾಕ್ಸ್ ಬಳಸಿ ನಕಲಿ ಚೀಟಿ ತಯಾರಿಸಿದ್ದರು. ಈ ಕುರಿತು ತಮಗೇ ದೂರು ಬಂದ ಬಳಿಕ ಹೆಚ್ಚಿನ ನಿಗಾ ವಹಿಸಲಾಗಿತ್ತು ಎಂದು ಜಿಲ್ಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿಗಳನ್ನು ನಕಲು ಮಾಡುವುದನ್ನು ಪತ್ತೆ ಹಚ್ಚಲು ಕಾಲೇಜಿ ಸಿಬ್ಬಂದಿಯಿಂದ ಮೆಗಾ ಪ್ಲಾನ್-ಕಾಲೇಜಿನ ನಡೆಗೆ ಎಲ್ಲಡೆ ಭಾರೀ ವಿರೋಧ!

ಪರೀಕ್ಷೆಯ ನಕಲಿ ಮಾಡದಂತೆ ಮೊದಲೇ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಗಿತ್ತು. ಅದ್ರು ಪರೀಕ್ಷೆ ನಡೆಯುವ ವೇಳೆ ವಿದ್ಯಾರ್ಥಿಗಳು ನಕಲು ಮಾಡಲು ಮುಂದಾಗಿದ್ದಾರೆ. ಈ ವೇಳೆ ದಾಳಿ ನಡೆಸಿ ನಕಲು ಚೀಟಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ. ವಿಜ್ಞಾನ ವಿಭಾಗದ ರಸಾಯನ ಶಾಸ್ತ್ರ ಪರೀಕ್ಷೆ ನಡೆಯುತ್ತಿದ್ದ ಸಾಮೂಹಿಕ ನಕಲು ಬೆಳಕಿಗೆ ಬಂದಿದೆ.

ಪರೀಕ್ಷೆಯಲ್ಲಿ ನಕಲು ಮಾಡಿ ಸಿಕ್ಕಿ ಬಿದ್ದ ಎಲ್ಲಾ ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಾಗಿ ತಿಳಿಸಿರುವ ಅಧಿಕಾರಿಗಳು, ವಿದ್ಯಾರ್ಥಿಗಳಿಂದ ಒಟ್ಟಾರೆ 200 ಕೆಜಿ ತೂಕದ ಚೀಟಿಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *