ಬಳ್ಳಾರಿಯಲ್ಲಿ ರಾತ್ರಿ ಧಾರಾಕಾರ ಮಳೆ- 200 ಕುರಿಗಳ ಸಾವು

ಬಳ್ಳಾರಿ: ಜಿಲ್ಲೆಯಲ್ಲಿ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. ಸುಮಾರು 3 ಗಂಟೆಗಳ ಕಾಲ ಧಾರಾಕಾರವಾಗಿ ಸುರಿದ ಮಳೆಯಿಂದ ಸಾಕಷ್ಟು ಅನಾಹುತ ಸಂಭವಿಸಿದೆ.

ಗುಡುಗು ಸಿಡಿಲು ಸಹಿತ ಮಳೆಯಿಂದ ಬಳ್ಳಾರಿ ಹೊರವಲಯದ ಭತ್ರಿಯ ಬಳಿಯ ಜಮೀನಿನಲ್ಲಿದ್ದ ಕುರಿಗಳಲ್ಲಿ ಸುಮಾರು 200 ಕುರಿಗಳು ಸಾವನ್ನಪ್ಪಿವೆ.

ಸಾವನ್ನಪ್ಪಿರುವ ಕುರಿಗಳು ಗಂಗಾಧರ, ಮಲ್ಲಯ್ಯ ಹಾಗೂ ನಾರಾಯಣ ಎನ್ನುವವರಿಗೆ ಸೇರಿದ್ದವಾಗಿವೆ. 200 ಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಪರಿಣಾಮ ಕುರಿಗಾರರಿಗೆ ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಕುರಿಗಳು ಸಾವನ್ನಪ್ಪಿದ ಸುದ್ದಿ ತಿಳಿಯುತ್ತಿದ್ದಂತೆ ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ವೆಂಕಟರಮಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೇ ಕುರಿಗಾರರಿಗೆ ಸ್ವಾಂತನ ಹೇಳಿ ಪರಿಹಾರ ಕೊಡಿಸುವ ಭರವಸೆ ನೀಡಿದರು.

Comments

Leave a Reply

Your email address will not be published. Required fields are marked *