ಸಿಗರೇಟ್‍ಗೋಸ್ಕರ ನಡೆದ ಗಲಾಟೆ ಇಬ್ಬರ ಕೊಲೆಯಲ್ಲಿ ಅಂತ್ಯ!

ಬೆಂಗಳೂರು: ಒಂದು ಸಿಗರೇಟ್‍ಗೋಸ್ಕರ ನಡೆದ ಗಲಾಟೆಯಲ್ಲಿ ಇಬ್ಬರು ದಾರುಣವಾಗಿ ಕೊಲೆಯಾಗಿರುವ ಘಟನೆ ಬೆಂಗಳೂರಿನ ಕೆಜಿ ಹಳ್ಳಿಯ ಗೊಂವಿಂದಪುರ ಮುಖ್ಯರಸ್ತೆಯಲ್ಲಿ ನಡೆದಿದೆ.

ಬುಧವಾರ ರಾತ್ರಿ ಅಮೀನ್ ಎಂಬಾತ ರಸ್ತೆ ಬದಿಯ ಅಂಗಡಿಯೊಂದರಿಂದ ಸಿಗರೇಟ್ ತೆಗೆದುಕೊಂಡು ಹಣ ನೀಡದೇ ಹೋಗುತ್ತಿದ್ದನು. ಈ ವೇಳೆ ಅಂಗಡಿ ಮಾಲೀಕ ಹಣ ಕೊಡು ಎಂದು ಕೇಳಿದ್ದಾರೆ. ಇದರಿಂದ ಸಿಟ್ಟಿಗೆದ್ದ ಅಮೀನ್, ಅಂಗಡಿ ಮಾಲೀಕನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ.

ಈ ವಿಷಯ ತಿಳಿದ ಮಾಲೀಕನ ಸಂಬಂಧಿಕರು, ಮಚ್ಚು ದೊಣ್ಣೆಗಳನ್ನು ಹಿಡಿದು ಸ್ಥಳಕ್ಕೆ ಬಂದಿದ್ದರು. ಇದೇ ವೇಳೆ ಇಲ್ಲಿನ ಬಿಬಿಎಂಪಿ ಅವರಣದಲ್ಲಿ ಅಮೀನ್, ಸ್ನೇಹಿತ ಮತೀನ್ ಸೇರಿದಂತೆ ಎರಡು ತಂಡಗಳ ಮಧ್ಯೆ ಗಲಾಟೆ ನಡೆದಿದೆ.

ಗಲಾಟೆ ಉಂಟಾಗಿ ದೊಣ್ಣೆಗಳಿಂದ ಹಲ್ಲೆ ಮಾಡಿದ ಪರಿಣಾಮ, ಅಮೀನ್ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಮತೀನ್ ಆಸ್ಪತ್ರೆ ಸಾಗಿಸುವ ವೇಳೆ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೆಜಿ ಹಳ್ಳಿ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *