ನೀರು ತುಂಬಿಟ್ಟ ಪಾತ್ರೆಯೊಳಗೆ ಬಿದ್ದು ಒಂದು ವರ್ಷದ ಕಂದಮ್ಮ ಸಾವು

ಬೆಳಗಾವಿ: ಮನೆಯಲ್ಲಿ ನೀರು ತುಂಬಿಸಿಟ್ಟ ಪಾತ್ರೆಯಲ್ಲಿ ಆಟವಾಡುತ್ತಿದ್ದ ಒಂದು ವರ್ಷದ ಮಗು ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಭೀಮರಾವ್ ಮಾಳಗಿ ಮತ್ತು ಸುಗಂಧಾ ಮಾಳಗಿ ದಂಪತಿ ಪುತ್ರ ಮುತ್ತುರಾಜ ಮೃತ ಪಟ್ಟ ಬಾಲಕ. ಮನೆಯಲ್ಲಿ ದಿನನಿತ್ಯದ ಬಳಕೆಗಾಗಿ ತುಂಬಿಸಿಟ್ಟ ನೀರಿನ ಪಾತ್ರೆಯಲ್ಲಿ ಮುತ್ತರಾಜ ಆಟವಾಡುತ್ತ ತಲೆ ಕೆಳಗಾಗಿ ಮುಗುಚಿಬಿದ್ದ ಕಾರಣ ಸ್ಥಳದಲ್ಲೇ ಉಸಿರುಘಟ್ಟಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: ಗಂಟಲಲ್ಲಿ ಚಕ್ಕುಲಿ ಸಿಲುಕಿ 1 ವರ್ಷದ ಪುಟ್ಟ ಕಂದಮ್ಮ ದುರ್ಮರಣ!

ಘಟನೆ ವೇಳೆ ಮನೆಯವರು ಬೇರೆ ಕೆಲಸದಲ್ಲಿ ಮಗ್ನರಾಗಿದ್ದಾಗ ಕಾರಣ ದುರ್ಘಟನೆ ನಡೆದಿದೆ. ಮಗುವಿನ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಕುರಿತು ಸದಲಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ : ಗಂಟಲಲ್ಲಿ ಸೆರಲ್ಯಾಕ್ ಸಿಲುಕಿ 3 ತಿಂಗಳ ಮಗು ಸಾವು

Comments

Leave a Reply

Your email address will not be published. Required fields are marked *