ಬೆಂಗ್ಳೂರಲ್ಲಿ 19 ಏರಿಯಾ ಕಂಟೈನ್ಮೆಂಟ್- ಮನೆಯಿಂದ ಹೊರಬರುವಂತಿಲ್ಲ, ವಾಹನಗಳು ಓಡಾಡುವಂತಿಲ್ಲ

– ಕಂಟೈನ್‍ಮೆಂಟ್ ಉಲ್ಲಂಘಿಸಿದ್ರೆ ಜೈಲೂಟ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಲಾಕ್ ಡೌನ್, ಸೀಲ್ ಡೌನ್ ಬೆನ್ನಲ್ಲೇ ಈಗ ಕಂಟೈನ್ಮೆಂಟ್ ವಾರ್ಡ್ ಬಂದಿದೆ. ಕೋವಿಂಡ್ 19 ಕಾಡುತ್ತಿರುವ ಏರಿಯಾಗಳಲ್ಲಿ ನಿಯಂತ್ರಿತ ವಲಯ ಎಂದು ಘೋಷಿಸಲಾಗಿದೆ. ಇಂದಿನಿಂದ ಪಕ್ಕಾ ನಿಯಮಗಳನ್ನು ಪಾಲಿಸಲೇಬೇಕು. ರಾಜ್ಯ ಸರ್ಕಾರ ಈ ಏರಿಯಾದಲ್ಲೇ ಹೀಗೆ ಇರಬೇಕು ಎಂದು ಆದೇಶಿಸಿದೆ.

19 ವಾರ್ಡ್ ಸಂಪೂರ್ಣ ಕಂಟೈನ್ಮೆಂಟ್ ಝೋನ್ ಎಂದು ಗುರುತಿಲಾಗಿದೆ. ದಕ್ಷಿಣ ವಲಯದ ಜೆ.ಪಿ.ನಗರ, ಗುರಪ್ಪನಪಾಳ್ಯ, ಶಾಕಾಂಬರಿನಗರ, ಹೊಸಹಳ್ಳಿ, ಬಾಪೂಜಿನಗರ, ಕರಿಸಂದ್ರ, ಸುಧಾಮನಗರ, ಪೂರ್ವ ವಲಯ ರಾಮಸ್ವಾಮಿ ಪಾಳ್ಯ, ಪುಲಕೇಶಿನಗರ, ಮಾರುತಿಸೇವಾನಗರ, ರಾಧಾಕೃಷ್ಣ ದೇವಸ್ಥಾನ ವಾರ್ಡ್, ಪಶ್ವಿಮ ವಲಯ ಶಿವನಗರ, ಕೆ.ಆರ್.ಮಾರುಕಟ್ಟೆ, ಪಾದರಾಯನಪುರ, ಆರ್.ಆರ್.ನಗರ ವಲಯದ ಆರ್.ಆರ್.ನಗರ ವಾರ್ಡ್, ಮಹದೇವಪುರವಲಯದ ಹೂಡಿ, ಹೊರಮಾವು ವಾರ್ಡ್, ಸಿಂಗಸಂದ್ರ, ಬೊಮ್ಮನಹಳ್ಳಿಯ ಬೇಗೂರು ವಾರ್ಡ್‍ಗಳನ್ನು ಕಂಟೈನ್ಮೆಂಟ್ ವಾರ್ಡ್ ಎಂದು ಘೋಷಣೆ ಮಾಡಲಾಗಿದೆ.

ಕಂಟೈನ್ಮೆಂಟ್ ಏರಿಯಾಗಳಲ್ಲಿ ಏನಿರುತ್ತೆ-ಏನಿರಲ್ಲ..?
* ಅಗತ್ಯ ವಸ್ತುಗಳು ಮನೆ ಬಾಗಿಲಿಗೆ ತಲುಪುತ್ತದೆ
* ಮೆಡಿಕಲ್ ಶಾಪ್ ,ಆಸ್ಪತ್ರೆ ,ತರಕಾರಿ ಮಳಿಗೆಗಳು ಮಾತ್ರ ಓಪನ್
* ಸುಖಾ ಸುಮ್ಮನೆ ಓಡಾಡುವಂತಿಲ್ಲ
* ವಾಕಿಂಗ್ ,ಜಾಕಿಂಗ್ ಕಾರಣ ನೀಡಿ ಹೊರಬರುವಂತಿಲ್ಲ
* ಪೊಲೀಸರ ಸರ್ಪಗಾವಲು ದಾಟುವಂತಿಲ್ಲ
* ಕೊವಿಂಡ್ ಬಂದ್ ಅಪಾಟ್ರ್ಮೆಂಟ್ ,ರಸ್ತೆಗಳು ಸೀಲ್ ಡೌನ್ ಪಕ್ಕಾ

ಕಂಟೈನ್ಮೆಂಟ್ ನಿಯಮಗಳೇನು?
ಕೊರೊನಾ ರೋಗಿ ವಾಸದ ಮನೆಯ 100 ಮೀಟರ್ ಸುತ್ತಮುತ್ತಲ ಪ್ರದೇಶವನ್ನು ಕಂಟೈನ್ಮೆಂಟ್‍ಝೋನ್ ಎಂದು ಕರೆಯಲಾಗುತ್ತದೆ. ಅಪಾರ್ಟ್‍ಮೆಂಟ್‍ನಲ್ಲಿ ಕೊರೊನಾ ಕೇಸ್ ಪತ್ತೆಯಾದ್ರೆ ಆ ಅಪಾರ್ಟ್‍ಮೆಂಟ್ ಬ್ಲಾಕ್ ಮಾಡಲಾಗುತ್ತದೆ. ಈ ಏರಿಯಾಗಳಿಗೆ ಯಾರೂ ಹೋಗುವಂತಿಲ್ಲ, ಯಾರೂ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳನ್ನು ಮನೆಬಾಗಿಲಿಗೆ ತಲುಪಿಸಲಾಗುತ್ತದೆ, ದಿನಸಿ ಅಂಗಡಿಗಳನ್ನು ತೆರೆಯುವಂತಿಲ್ಲ. ಹೈರಿಸ್ಕ್ ರೋಗಿಗಳನ್ನು ಬೇರೆ ಕಡೆಗಳಿಗೆ ಕರೆದೊಯ್ದು ಕ್ವಾರಂಟೈನ್ ಮಾಡಲಾಗುತ್ತದೆ. ಉಳಿದವರಿಗೆ ಹೋಂ ಕ್ವಾರಂಟೈನ್‍ನಲ್ಲಿರುವಂತೆ ಸೂಚಿಸಲಾಗುತ್ತದೆ.

ಕಂಟೈನ್‍ಮೆಂಟ್ ಝೋನ್‍ನಿಂದ 5 ಕಿಲೋ ಮೀಟರ್ ಸುತ್ತಮುತ್ತಲ ಪ್ರದೇಶವನ್ನು ಬಫರ್ ಝೋನ್ ಎಂದು ಕರೆಯಲಾಗುತ್ತಿದ್ದು, 1 ಕಿಲೋ ಮೀಟರ್ ವ್ಯಾಪ್ತಿಯೊಳಗೆ ಮನೆ ಮನೆಗೂ ತೆರಳಿ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ.

ಒಟ್ಟಿನಲ್ಲಿ ಕಂದಾಯ ಇಲಾಖೆ ಅಗತ್ಯ ವಸ್ತುಗಳ ಪೂರೈಕೆ, ಬಿಬಿಎಂಪಿ ಸ್ವಚ್ಚತೆ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಜವಬ್ದಾರಿ ಒಪ್ಪಿದೆ. ಇದೆಲ್ಲ ಎಷ್ಟರಮಟ್ಟಿಗೆ ವರ್ಕ್ ಆಗುತ್ತೆ ಎಂಬುದನ್ನು ಕಾದು ನೋಡಬೇಕಿದೆ.

Comments

Leave a Reply

Your email address will not be published. Required fields are marked *