ಕಾಚಳ್ಳಿ ಕಾಯಿ ತಿಂದು 18 ಮಂದಿ ಅಸ್ವಸ್ಥ

ಮಂಡ್ಯ: ಬೇಲಿಯಲ್ಲಿ ಬೆಳೆಯುವ ಒಂದು ಬಗೆಯ ಕಾಯಿಯನ್ನು ತಿಂದು ಮಕ್ಕಳು ಸೇರಿದಂತೆ 18 ಮಂದಿ ಅಸ್ವಸ್ಥರಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ದೊಡ್ಡೇಗೌಡನ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

18 ಜನರಲ್ಲಿ 14 ಮಂದಿ ಮಕ್ಕಳಾಗಿದ್ದು, ನಾಲ್ವರು ದೊಡ್ಡವರಾಗಿದ್ದಾರೆ. ಚಿರಂತ್ (14), ದಿಗಂತ್ (9), ಶ್ರೇಯಾ (6), ತರುಣ್ (10), ವರ್ಷಮ್ (11), ಅಜಿತ್ (10), ರೋಜಾ (11), ಶರಣ್ (5), ಜನಿತ್ (9), ದರ್ಶನ್ (16), ಚೇತನ್ (19), ಯಶ್ವಂತ್ (12), ಶಿವ (36), ಮರಿಯಯ್ಯ (70), ವೆಂಕಟೇಶ್ (65), ಗೌರಮ್ಮ (38), ಸಿಂಚನ (16) ಮತ್ತು ಮರಿನಿಂಗಯ್ಯ (35) ಅಸ್ವಸ್ಥಗೊಂಡಿದ್ದಾರೆ.

ಈ ಭಾಗದಲ್ಲಿ ಕಾಚಳ್ಳಿ ಕಾಯಿ ಎಂದು ಕರೆಯುತ್ತಾರೆ. ಕಾಚಳ್ಳಿ ಕಾಯಿಯನ್ನು ಬೇಲಿಯಲ್ಲಿ ಬೆಳೆಯುತ್ತಾರೆ. ಮೊದಲಿಗೆ ಇದನ್ನು ದೊಡ್ಡವರು ತಿಂದಿದ್ದಾರೆ. ಇದನ್ನು ನೋಡಿದ ಮಕ್ಕಳು ಅದೇ ಕಾಯಿಯನ್ನ ತಿಂದಿದ್ದಾರೆ. ಕಾಯಿ ತಿಂದು ಅರ್ಧಗಂಟೆಯಲ್ಲೇ ಎಲ್ಲರಿಗೂ ವಾಂತಿ ಭೇದಿ ಪ್ರಾರಂಭವಾಗಿದೆ. ತಕ್ಷಣ ಅಸ್ವಸ್ಥ ಮಕ್ಕಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *