ಮನೆಯಲ್ಲಿ ನಾನ್ ವೆಜ್ ಮಾಡಿಲ್ಲವೆಂದು ನೇಣಿಗೆ ಶರಣಾದ 10ರ ಪೋರ

ಕಲಬುರಗಿ: ಮನೆಯಲ್ಲಿ ನಾನ್ ವೆಜ್ ಮಾಡದ ಹಿನ್ನೆಲೆಯಲ್ಲಿ ಮನನೊಂದ ಬಾಲಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಜಿಲ್ಲೆಯ ಸೇಡಂ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಾಮ್‍ದಾಸ್(10) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಬಾಲಕ. ಗುರುವಾರ ರಾತ್ರಿ ಊಟದ ವಿಷಯದಲ್ಲಿ ಹೆತ್ತವರ ಜೊತೆ ಬಾಲಕ ಜಗಳವಾಡಿದ್ದನು.

ಮೊಹರಂ ಹಬ್ಬದ ಹಿನ್ನೆಲೆ ರಾಮ್‍ದಾಸ್ ಗುರುವಾರ ರಾತ್ರಿ ಮನೆಯಲ್ಲಿ ನಾನ್ ವೆಜ್ ಮಾಡಲು ಹೇಳಿದ್ದನು. ಆದರೆ ಆತನ ಪೋಷಕರು ಶುಕ್ರವಾರ ನಾನ್ ವೆಜ್ ಮಾಡುತ್ತೀವಿ ಎಂದು ಆತನಿಗೆ ಹೇಳಿದರು. ಇದ್ದರಿಂದ ಬೇಸತ್ತ ರಾಮ್‍ದಾಸ್ ನೇಣಿಗೆ ಶರಾಣಾಗಿದ್ದಾನೆ.

ಇಂದು ಬೆಳಗ್ಗೆ ಕುಟುಂಬಸ್ಥರು ಮೊಹರಂ ಹಬ್ಬದಲ್ಲಿ ಭಾಗಿಯಾಗಲು ಹೋದಾಗ ರಾಮ್‍ದಾಸ್ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಸದ್ಯ ಈ ಕುರಿತು ಮುದೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *