ಹೊಸ ಮನೆ ಕಟ್ಟಿದ್ದ ಅವಿವಾಹಿತ ಪೊಲೀಸ್ ಪೇದೆ ಆತ್ಮಹತ್ಯೆಗೆ ಶರಣು

– ರೈಲಿಗೆ ತಲೆಕೊಟ್ಟು ಸೂಸೈಡ್

ತುಮಕೂರು: ಪೊಲೀಸ್ ಪೇದೆಯೊಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಣಿಗಲ್ ರೈಲ್ವೆ ನಿಲ್ದಾಣದ ಬಳಿ ನಡೆದಿದೆ.

ಕುಣಿಗಲ್ ಠಾಣೆಯ ಯಲ್ಲಾಲಿಂಗ ಮೇಟಿ (29) ಆತ್ಮಹತ್ಯೆ ಮಾಡಿಕೊಂಡ ಪೇದೆ. ಕುಣಿಗಲ್ ರೈಲ್ವೆ ನಿಲ್ದಾಣದ ಬಳಿ ಶನಿವಾರ ಘಟನೆ ನಡೆದಿದೆ. ಮೃತ ಪೇದೆ ಮೂಲತಃ ವಿಜಯಪುರ ಜಿಲ್ಲೆಯವರೆಂದು ತಿಳಿದು ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದಿಲ್ಲ. ಈ ಸಂಬಂಧ ಕುಣಿಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ಪೇದೆ ಯಲ್ಲಾಲಿಂಗ ಮೇಟಿ ವಿಜಯಪುರದಲ್ಲಿ ಹೊಸದಾಗಿ ಮನೆಕಟ್ಟಿದ್ದರು ಎನ್ನಲಾಗಿದೆ. ಅವಿವಾಹಿತನನಾಗಿದ್ದ ಯಲ್ಲಾಲಿಂಗ ಸದಾ ಒತ್ತಡದಲ್ಲಿ ಇರುತ್ತಿದ್ದರು ಎನ್ನಲಾಗಿದೆ. ಕೌಟುಂಬಿಕ ಕಾರಣದಿಂದಲೇ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

Comments

Leave a Reply

Your email address will not be published. Required fields are marked *