ಹುಡುಗ್ರು ಸರಿಯಿಲ್ಲ, ಅವರ ಬುದ್ಧಿ ಸರಿಯಿಲ್ಲ – ಮಂಜು ಹೀಗಂದಿದ್ಯಾಕೆ..?

ಬಿಗ್‍ಬಾಸ್ ಮನೆಯ ಮೋಸ್ಟ್ ಎಂಟರ್​ಟೈನರ್ ಅಂದರೆ ಮಂಜು. ದೊಡ್ಮನೆಗೆ ಎಂಟ್ರಿ ಕೊಟ್ಟಾಗಿನಿಂದಲೂ ಎಲ್ಲರ ಜೊತೆ ಬೆರೆಯುತ್ತಿದ್ದ ಮಂಜು, ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಒಂದು ರೀತಿ ತಮಗೆ ಕಂಫರ್ಟ್ ಇರುವವರೊಂದಿಗೆ ಮಾತ್ರ ಹೆಚ್ಚಾಗಿ ಬೆರೆಯುತ್ತಿದ್ದಾರೆ.

ಸದ್ಯ ಶುಭಾ ಪೂಂಜಾ ಮಂಜುಗೆ ಯಾವಾಗಲೂ ಹುಡುಗಿಯರ ಜೊತೆಯಲ್ಲಿಯೇ ಇರುತ್ತೀಯಲ್ಲ ಹೋಗಿ ಹುಡುಗರೊಟ್ಟಿಗೆ ಕೂಡ ಕುಳಿತುಕೊಂಡು ಮಾತನಾಡು ಎಂದು ಹೇಳುತ್ತಾರೆ. ಇದಕ್ಕೆ ಮಂಜು ಹುಡುಗರು ಸರಿಯಾಗಿಲ್ಲ. ಯಾಕೆ ಎಂದು ಕೇಳಿದಾಗ ಹುಡುಗರ ಬುದ್ಧಿ ಸರಿಯಾಗಿಲ್ಲ ಎನ್ನುತ್ತಾರೆ.

ಇದೇ ವೇಳೆ ಶಮಂತ್ ಎಲ್ಲೆಲ್ಲೋ ಇದ್ವಿ ನಾವು, ಹೆಂಗಾದ್ವಿ ನೋಡಿ ನೀವು, ಬರಬರುತ್ತಾ ಜೀವನ ಯಾಕೋ ಕಷ್ಟ ಆಗುತ್ತಿದೆ. ಬಜರ್ ಆದಾಗ ಓಡಿ ಹೋಗ್ತೀವಿ. ಸಣ್ಣ ಮ್ಯಾಟರ್‌ಗೆ ಕಿತ್ತಾಡ್ತೀವಿ ಎಂದು ಹಾಡು ಹೇಳುತ್ತಿರುತ್ತಾರೆ. ಆಗ ಮಂಜು, ಶಮಂತ್‍ರನ್ನು ವೈಷ್ಣವಿ ಹಾಗೂ ಶುಭಾಗೆ ತೋರಿಸಿ ಅರ್ಥ ಆಯ್ತಾ ನಾನು ಯಾಕೆ ಸೇರುವುದಿಲ್ಲ. ಇವನು ಈ ತರ ಎಂದು ಹೇಳುತ್ತಾರೆ.

ಬಳಿಕ ಚಕ್ರವರ್ತಿಯವರನ್ನು ತೋರಿಸಿ, ಅವರು ಅವರದ್ದೇ ಆದ ಲೋಕದಲ್ಲಿ ಮುಳುಗಿರುತ್ತಾರೆ. ಇನ್ನೂ ಪ್ರಶಾಂತ್ ಕೇಸು, ಪಾಸು, ಕೋರ್ಟ್, ಜೈಲು, ಪೈಲು ಎಂದು ಕೊಂಡಿರುತ್ತಾರೆ. ಇನ್ನೊಬ್ಬ ಅರವಿಂದ್ ರನ್ನಿಂಗ್ ಎಂದು ಓಡುವ ಸನ್ನೆ ಮಾಡಿ ತೋರಿಸುತ್ತಾರೆ.

ಮಂಜು ಓಡುವುದನ್ನು ತೋರಿಸಿದ್ದನ್ನು ಕಂಡು ಶುಭಾ ಹಾಗೂ ವೈಷ್ಣವಿ ಜೋರಾಗಿ ನಗುತ್ತಾ, ಬಹಳ ಕ್ಯೂಟ್ ಆಗಿ ರನ್ನಿಂಗ್‍ನನ್ನು ತೋರಿಸಿದ್ರಿ, ಮತ್ತೊಮ್ಮೆ ತೋರಿಸಿ ಎಂದು ಕೇಳುತ್ತಾರೆ. ಇದನ್ನೂ ಓದಿ:ದೊಡ್ಮನೆ ಪ್ರಣಯ ಪಕ್ಷಿಗಳ ನಡುವೆ ಮುನಿಸು – ಡಿಯು ಜೊತೆ ಮಾತು ಬಿಟ್ಟ ಅರವಿಂದ್

Comments

Leave a Reply

Your email address will not be published. Required fields are marked *