ಹಗಲು ಸೆಕ್ಯುರಿಟಿ ಗಾರ್ಡ್, ಕತ್ತಲಾಗ್ತಿದ್ದಂತೆ ಕಳ್ಳತನ

ಬೆಂಗಳೂರು: ಲಾಕ್‍ಡೌನ್ ಅಂದ್ರೆ ಇಡೀ ಊರಿಗೆ ಊರೇ ಕಂಪ್ಲೀಟ್ ಸ್ತಬ್ಧವಾಗಿರುತ್ತದೆ. ಅದೇ ಕೆಲವರ ಬಂಡವಾಳ ಆಗಿದೆ. ಅಪಾರ್ಟ್ ಮೆಂಟ್ ಗಳಲ್ಲಿ ಸೆಕ್ಯೂರಿಟಿ ಕೆಲಸ ಮಾಡುವ ಜೊತೆಗೆ ಮನೆ ಲಾಕ್ ಆಗಿರೋದನ್ನ ಮ್ಯಾಪಿಂಗ್ ಮಾಡಿ ಕಳ್ಳತನಕ್ಕೆ ಇಳಿಯುತ್ತಿದ್ದ ತಂಡ ಪೊಲೀಸರ ಬಲೆಗೆ ಬಿದ್ದಿದೆ.

ರಾಮೂರ್ತಿನಗರ ಪೊಲೀಸರು ಆರು ಜನರ ನೇಪಾಳಿ ಗ್ಯಾಂಗ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ರಾಜೇಶ್ ಖಡ್ಕ, ಸಚಿನ್ ಕುಮಾರ್, ಬೋರಾ ಸೇರಿದಂತೆ ಆರು ಮಂದಿ ಬಂಧನಕ್ಕೆ ಒಳಗಾದ ಆರೋಪಿಗಳು. ಬಂಧಿತರಿಂದ ಹದಿನೇಳು ಲಕ್ಷ ರೂಪಾಯಿ ಬೆಲೆಬಾಳುವ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಅಪಾರ್ಟ್ ಮೆಂಟ್ ನಲ್ಲಿ ಲಾಕ್ ಆಗಿರುವ ಫ್ಲ್ಯಾಟ್ ಗುರುತಿಸಿ ಕಳ್ಳತನಕ್ಕಿಳಿಯುತ್ತಿದ್ದರು. ರಾಮೂರ್ತಿನಗರ ಠಾಣಾ ವ್ಯಾಪ್ತಿಯಲ್ಲಿ ಐದು ಮನೆ ಕಳ್ಳತನ, ಆರ್.ಆರ್.ನಗರ ಠಾಣಾವ್ಯಾಪ್ತಿಯಲ್ಲಿ ಕೈಚಳಕ ತೋರಿಸಿದ್ದ ಆಸಾಮಿಗಳು ಪೊಲೀಸರ ಖೆಡ್ಡಾಕ್ಕೆ ಬಿದ್ದಿದ್ದಾರೆ.

Comments

Leave a Reply

Your email address will not be published. Required fields are marked *