ಕೊರೊನಾ ಸೋಂಕಿಗೆ ದಂಪತಿ ಬಲಿ – ಪತಿಯ ಅಂತ್ಯ ಸಂಸ್ಕಾರ ಮುಗಿಸಿ ಬರುವಷ್ಟರಲ್ಲಿ ಪತ್ನಿಯೂ ಸಾವು

ಚಾಮರಾಜನಗರ: ಕೊರೊನಾ ಸೋಂಕಿಗೆ ದಂಪತಿಗಳಿಬ್ಬರು ಬಲಿಯಾಗಿರುವ ಘಟನೆ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ನಾಗರತ್ನಮ್ಮ ಬಡಾವಣೆಯ ಸುದರ್ಶನ್, ಹೇಮಲತಾ ಸೋಂಕಿಗೆ ಬಲಿಯಾದ ದಂಪತಿ. ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಇಬ್ಬರು ಕೊರೊನಾ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಬೆಳಗ್ಗೆ ಪತಿ ಸುದರ್ಶನ್ ಕೊರೊನಾದಿಂದ ಮೃತಪಟ್ಟಿದ್ದು, ತದಾನಂತರ ಪತಿಯ ಅಂತ್ಯ ಸಂಸ್ಕಾರ ನಡೆಸಿ ವಾಪಾಸ್ ಬರುವ ವೇಳೆಗೆ ಪತ್ನಿ ಹೇಮಲತಾ ಕೂಡ ಮೃತಪಟ್ಟಿದ್ದಾರೆ.

ಸುದರ್ಶನ್ ಗುಂಡ್ಲುಪೇಟೆ ಪಟ್ಟಣದಲ್ಲಿ ಚುರುಮುರಿ ವ್ಯಾಪಾರ ನಡೆಸಿ ಜೀವನ ಸಾಗಿಸುತ್ತಿದ್ದರು. ಪತಿಯು ಸಾವನ್ನಪ್ಪಿದ ದಿನವೇ ಪತ್ನಿಯ ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *