ಸೇವಂತಿ ಗಿಡ ಬೆಳೆಯೋಕೆ ರೈತನ ಸ್ಮಾರ್ಟ್ ಐಡಿಯಾ

ಚಿಕ್ಕಬಳ್ಳಾಪುರ: ರಾತ್ರಿಯಾದರೆ ಸಾಕು ಆ ರೈತನ ಹೂದೋಟ ವಿದ್ಯುತ್ ದೀಪಗಳ ಬೆಳಕಿನಿಂದ ಪಳಪಳ ಅಂತ ಝಗಮಗಿಸಿರುತ್ತದೆ. ಈ ಹೂದೋಟದ ತುಂಬಾ ನೂರಾರು ದೀಪಗಳನ್ನು ಆಳವಡಿಸಲಾಗಿದ್ದರಿಂದ ರಾತ್ರಿಯಿಡೀ ಹೂದೋಟ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿರುತ್ತದೆ. ಅರೇ ಈ ರೈತನು ಜಮೀನಿಗೆ ಏಕೆ ವಿದ್ಯುತ್ ದೀಪಗಳ ಅಲಂಕಾರ ಮಾಡಿದ್ದಾನೆ ಎಂಬುದು ಹಲವರ ಪ್ರಶ್ನೆಯಾಗಿದೆ.

ಚಿಕ್ಕಬಳ್ಳಾಪುರ ನಗರ ಶಿಡ್ಲಘಟ್ಟ ಮಾರ್ಗದ ಜಿಲ್ಲಾಡಳಿತ ಭವನದ ಎದುರು ಪಟ್ರೇನಹಳ್ಳಿ ಗ್ರಾಮದ ಗಿರೀಶ್ ಎಂಬ ರೈತ ತನ್ನ ಎರಡೂವರೆ ಎಕರೆ ಸೇವಂತಿಗೆ ಹೂದೋಟಕ್ಕೆ ವಿದ್ಯುತ್ ದೀಪಗಳನ್ನ ಅಳವಡಿಸಿದ್ದಾರೆ. ರಾತ್ರಿಯಾದರೆ ಸಾಕು ವಿದ್ಯುತ್ ದೀಪಗಳಿಂದ ಸೇವಂತಿಗೆ ಹೂದೋಟ ಝಗಮಗಿಸುತ್ತಾ, ನೋಡುಗರ ಕಣ್ಣು ಕುಕ್ಕುವಂತೆ ಕಾಣಿಸುತ್ತದೆ. ಅಷ್ಟಕ್ಕೂ ಈ ಹೂ ದೋಟದ ತುಂಬಾ ಸಾಲು ಸಾಲು ವಿದ್ಯುತ್ ದೀಪಗಳನ್ನ ಅಳವಡಿಸಿರುವುದು ಸೇವಂತಿ ತೋಟದ ಅಲಂಕಾರಕ್ಕಾಗಿ ಅಲ್ಲ. ಬದಲಾಗಿ ಸೇವಂತಿ ಹೂ ಸೂಪರ್ ಕಲರ್ ಬಂಪರ್ ಇಳುವರಿ ಪಡೆಯುವುದಕ್ಕೆ ರೈತ ಗಿರೀಶ್ ಮಾಡಿರುವ ಸ್ಮಾರ್ಟ್ ಯೋಜನೆಯಾಗಿದೆ.

ಎರಡೂವರೆ ಎಕರೆಯಲ್ಲಿ ರೈತ ಗಿರೀಶ್ ಸೇವಂತಿ ಗಿಡ ನಾಟಿ ಮಾಡಿದ್ದು, ಚಳಿಗಾಲದ ಸಂದರ್ಭದಲ್ಲಿ ಸೂರ್ಯನ ಶಾಖ ಕಡಿಮೆ ಜೊತೆಗೆ ಮಂಜು ಜಾಸ್ತಿ ಇರುತ್ತದೆ. ಹೀಗಾಗಿ ಗಿಡದ ಬೆಳವಣಿಗೆ ಕಡಿಮೆ ಆಗುತ್ತದೆ ಎಂದು ಸೇವಂತಿ ಗಿಡಕ್ಕೆ ಶಾಖ ಉಂಟು ಮಾಡುವ ಸಲುವಾಗಿ ಭಿನ್ನ ಭಿನ್ನವಾಗಿ ಯೋಚಿಸಿ ತಮ್ಮ ಎರಡೂವರೆ ಎಕರೆಗೆ ಸರಿ ಸುಮಾರು 500-600 ವಿದ್ಯುತ್ ದೀಪಗಳನ್ನು 10-ರಿಂದ 12 ಅಡಿ ದೂರ ದೂರ ಅಳವಡಿಸಿದ್ದಾರೆ.

ಬೇರೆ ರೈತರು ಮಾಡಿದ್ದನ್ನು ತಿಳಿದಿದ್ದ ಗಿರೀಶ್ ಅವರ ಈ ಐಡಿಯಾ ಇದೀಗ ಸಕ್ಸಸ್ ಆಗಿದೆ. ಲೈಟಿಂಗ್ಸ್ ಹಾಕಿ ಗಿರೀಶ್ ಬೆಳೆದಿರುವ ಸೇವಂತಿ ಹೂ ಗಿಡ ಬಣ್ಣದಿಂದ ಕೂಡಿದ್ದು ಉತ್ತಮ ಗುಣಮಟ್ಟದ್ದಾಗಿದೆ. ಇದರಿಂದ ಮಾರುಕಟ್ಟೆಯಲ್ಲಿ ಗಿರೀಶ್ ಬೆಳೆದ ಹೂಗೆ ಭಾರೀ ಬೇಡಿಕೆ ಜೊತೆಗೆ ಬಂಪರ್ ಬೆಲೆಯೂ ಸಿಗುತ್ತಿದೆ. ಒಟ್ಟಿನಲ್ಲಿ ಭಿನ್ನ ವಿಭಿನ್ನ ಆಲೋಚನೆ ಮಾಡಿ ರೈತ ಗಿರೀಶ್ ಸ್ಮಾರ್ಟ್ ಐಡಿಯಾದಿಂದ ಬಂಪರ್ ಸೇವಂತಿ ಬೆಳೆದು ಬಂಪರ್ ಲಾಭನೂ ಮಾಡುತ್ತಿರುವುದು ಇತರೇ ರೈತರು ಮಾಡವಂತೆ ಪ್ರೇರಣೆಯಾಗಿಯಾಗಿ ಇತರೆ ರೈತರು ಲೈಟಿಂಗ್ಸ್ ಐಡಿಯಾ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ.

ಇನ್ನೂ ಈ ಲೈಟಿಂಗ್ಸ್ ಗೆ ಎಂದು ಬೆಸ್ಕಾಂ ಇಲಾಖೆಯಿಂದ ಪ್ರತ್ಯೇಕ ಪವರ್ ಕನೆಕ್ಷನ್ ಪಡೆದಿದ್ದು, ಪ್ರತಿ ತಿಂಗಳು ಅಂದಾಜು 10,000 ರೂಪಾಯಿ ಕರೆಂಟ್ ಬಿಲ್ ಬರುತ್ತದೆ ಎಂದು ಗಿರೀಶ್ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *