ಶೂಟಿಂಗ್‍ ಸೆಟ್‌ಗೆ ನುಗ್ಗಿದ ದರ್ಶನ್ ಅಭಿಮಾನಿಗಳು – ಕ್ಷಮೆ ಕೇಳಿದ ಜಗ್ಗೇಶ್

ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಗ್ಗೆ ಕೀಳಾಗಿ ನಟ ಜಗ್ಗೇಶ್ ಮಾತನಾಡಿದ್ದಾರೆ ಎಂಬ ವಿಚಾರದ ಕುರಿತಾಗಿ ತೋತಾಪುರಿ ಸೆಟ್‍ನಲ್ಲಿ ನಟ ದರ್ಶನ್ ಅಭಿಮಾನಿಗಳ ಪ್ರತಿಭಟನೆ ಮಾಡಿದ್ದಾರೆ.

ಮೈಸೂರಿನ ಟಿ ನರಸೀಪುರದಲ್ಲಿ ನಡೆಯುತ್ತಿದ್ದ ತೋತಾಪುರಿ ಶೂಟಿಂಗ್‍ಗೆ ನುಗ್ಗಿದ ದರ್ಶನ್ ಅಭಿಮಾನಿಗಳು ಕ್ಷಮೆ ಕೇಳುವಂತೆ ಪಟ್ಟು ಹಿಡಿದಿದ್ದಾರೆ.


`ಡಿ ಬಾಸ್’ ಅಭಿಮಾನಿಗಳ ಕ್ಷಮೆ ಕೇಳಿದ ಜಗ್ಗೇಶ್, ದರ್ಶನ್ ಮತ್ತು ನನ್ನ ನಡುವೆ ತಂದಿಡುವ ಹುನ್ನಾರ ಮಾಡಿದ್ದಾರೆ. ಸಿನಿಮಾ ಇಂಡಸ್ಟ್ರಿಯಲ್ಲಿ ರಾಜಕೀಯ ಇದೆ. ಪಿತೂರಿ ಮಾಡಿದ್ದಾರೆ. ನಾನು ದರ್ಶನ್ ಬಗ್ಗೆ ಆ ರೀತಿ ಮಾತನಾಡಲೇ ಇಲ್ಲ. ನಾನು ಒಂದು ಪತ್ರಿಕೆಯ ಬಗ್ಗೆ ಮಾತನಾಡಿದೆ. ಈ ವಿಚಾರವನ್ನು ಇಟ್ಟುಕೊಂಡು ನನ್ನ ವಿರುದ್ಧ ಹುನ್ನಾರ ಮಾಡಿದ್ದಾರೆ. ನನಗೆ ಇದಕ್ಕೂ ಸಂಬಂಧವಿಲ್ಲ, ಇಂಡಸ್ಟ್ರೀಯಲ್ಲಿ ದೊಡ್ಡ ರಾಜಕೀಯ ನಡೆಯುತ್ತಿದೆ ಎಂದು ದರ್ಶನ್ ಅಭಿಮಾನಿಗಳಿಗೆ ನಟ ಜಗ್ಗೇಶ್ ಸ್ಪಷ್ಟನೆ ನೀಡಿದ್ದಾರೆ.

ಜಗ್ಗೇಶ್ ವಿರುದ್ಧವಾಗಿ ಘೋಷಣೆ ಕೂಗಿ, ದರ್ಶನ್ ಅವರ ಬಳಿ ಕ್ಷಮೆ ಕೇಳಬೇಕು. ಒಬ್ಬ ಹಿರಿಯ ನಟರಾಗಿ ನೀವು ಹೇಗಿರಬೇಕು ಎಂದು ಅಭಿಮಾನಿಗಳು ಜಗ್ಗೇಶ್ ಅವರನ್ನು ಕೇಳಿದ್ದಾರೆ. ನಟ ದರ್ಶನ್‍ಗೂ ಕರೆ ಮಾಡಲು ನಟ ಜಗ್ಗೇಶ್ ಯತ್ನಿಸಿದ್ದಾರೆ.

Comments

Leave a Reply

Your email address will not be published. Required fields are marked *