ಸು’ಶಾಂತ’ವಾದ ಸಿಂಗ್ ರಜಪೂತ್

ಮುಂಬೈ: ಭಾನುವಾರ ಆತ್ಮಹತ್ಯೆಗೆ ಶರಣಾಗಿದ್ದ ನಟ ಸುಶಾಂತ್ ಸಿಂಗ್ ರಜಪೂತ್ ಅಂತ್ಯಕ್ರಿಯೆ ಇಂದು ಮುಂಬೈನ ವಿಲೆ ಪಾರ್ಲೆಯ ಸೇವಾ ಸಮಾಜ ಸ್ಮಶಾನದಲ್ಲಿ ನಡೆಯಿತು. ಕೊರೊನಾ ಹಿನ್ನೆಲೆಯಲ್ಲಿ ಕೇವಲ 20 ಜನರಿಗೆ ಭಾಗಿಯಾಗಲು ಅನುಮತಿ ನೀಡಲಾಗಿತ್ತು.

ಸುಶಾಂತ್ ಸಿಂಗ್ ಕುಟುಂಬಸ್ಥರು, ಕಿರುತೆರೆಯ ಕಲಾವಿದರು, ಬಾಲಿವುಡ್ ನಟಿಯರಾದ ಶ್ರದ್ಧಾ ಕಪೂರ್, ಕೃತಿ ಸನನ್, ರಿಯಾ ಚಕ್ರವರ್ತಿ, ವಿವೇಕ್ ಒಬೇರಾಯ್, ಅರ್ಜುನ್ ಬಿಜಲಾನಿ ಸೇರಿದಂತೆ ಇನ್ನಿತರು ಅಂತಿಮ ವಿಧಾನದಲ್ಲಿ ಭಾಗಿಯಾಗಿ ಅಗಲಿದ ತಾರೆಗೆ ಅಂತಿಮ ನಮನ ಸಲ್ಲಿಸಿದರು.

https://www.instagram.com/p/CBdIXSrnMqO/

ಮಳೆಯ ನಡುವೆಯೂ ಸುಶಾಂತ್ ಸಿಂಗ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದರು. ಕೊರೊನ ಆತಂಕದ ಹಿನ್ನೆಲೆಯಲ್ಲಿ ಅಭಿಮಾನಿಗಳಿಗೆ ಸ್ಮಶಾನದೊಳಗೆ ಪ್ರವೇಶ ನಿರಾಕರಿಸಲಾಗಿತ್ತು. ಗೆಳತಿ ರಿಯಾ ಚಕ್ರವರ್ತಿಗೆ ತೆರಳಿ ಸುಶಾಂತ್ ಅಂತಿಮ ದರ್ಶನ ಪಡೆದಿದ್ದರು. ಕೊನೆಯ ಬಾರಿ ಸುಶಾಂತ್ ರಿಯಾಗೆ ಫೋನ್ ಮಾಡಿದ್ದರಿಂದ ಪೊಲೀಸರು ನಟಿಯ ಹೇಳಿಕೆಯನ್ನು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ.

https://www.instagram.com/p/CBc_Rpynowy/

 

Comments

Leave a Reply

Your email address will not be published. Required fields are marked *