ಸುಳ್ಳು ಹೇಳಿ ಮಕ್ಕಳನ್ನ ಮೇಲ್ಛಾವಣಿಗೆ ಕರೆದೊಯ್ದಳು – ಒಬ್ಬೊಬ್ಬರಂತೆ 5 ಜನರನ್ನ ಕೆಳಗೆ ಎಸೆದ್ಳು

– ಎಲ್ಲರನ್ನ ಕ್ಯಾಚ್ ಹಿಡಿದು ರಕ್ಷಿಸಿದ ಮತ್ತೋರ್ವ ಮಹಿಳೆ

ರಾಂಚಿ: ಮಹಿಳೆಯೊಬ್ಬಳನ್ನು ಐವರು ಮಕ್ಕಳನ್ನ ಮೇಲ್ಛಾವಣೆಯಿಂದ ಕೆಳಗೆ ಎಸೆದಿರುವ ಘಟನೆ ಜಾರ್ಖಂಡ್ ರಾಜ್ಯದ ಸಾಹಿಬ್‍ಗಂಜ್ ನಲ್ಲಿ ಭಾನುವಾರ ಬೆಳಗ್ಗೆ ನಡೆದಿದೆ. ಐವರಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಓರ್ವ ಯುವಕ ಗಾಯಗೊಂಡಿದ್ದು, ಗಾಯಾಳುಗಳನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಿಹಾರಿ ಮಂಡಲ್ ಭವನದಲ್ಲಿ ಮಕ್ಕಳು ಟಿವಿ ನೋಡುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಮಹಿಳೆ ಐವರನ್ನ ಮೇಲಕ್ಕೆ ಕರೆದುಕೊಂಡು ಹೋಗಿ ಕೊಲೆಗೆ ಯತ್ನಿಸಿದ್ದಾಳೆ. ಮಹಿಳೆ ಮಕ್ಕಳನ್ನ ಎಸೆಯುವುದನ್ನ ಗಮನಿಸಿದ ಶರ್ಮಿಳಾ ಎಂಬವರು ಎಲ್ಲರನ್ನೂ ಕ್ಯಾಚ್ ಹಿಡಿದು ರಕ್ಷಣೆ ಮಾಡಿದ್ದಾರೆ. ಆದ್ರೆ ರಕ್ಷಣೆ ವೇಳೆ ಅಂಶು ಕುಮಾರ್ (12) ಮತ್ತು ಆಯುಷ್ ಕುಮಾರ್ (10) ಗಾಯಗೊಂಡಿದ್ದಾರೆ. ಮಕ್ಕಳ ರಕ್ಷಣೆಯಲ್ಲಿ ತೊಡಗಿದ್ದ ಬುದನ್ ಎಂಬ ಯುವಕ ಸಹ ಗಾಯಗೊಂಡಿದ್ದಾನೆ.

ವಿಷಯ ತಿಳಿಯುತ್ತಿದ್ದಂತೆ ಘಟನಾ ಸ್ಥಳಕ್ಕೆ ತೆರಳಿದ ಎಸ್‍ಡಿಪಿಓ ವಿಜಯ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಹಿಳೆಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ವರದಿಯಾಗಿದೆ.

 

Comments

Leave a Reply

Your email address will not be published. Required fields are marked *