ಸುಮಲತಾ ನಟೋರಿಯಸ್, ಸಂಸದ ಸ್ಥಾನಕ್ಕೆ ಅರ್ಹರಲ್ಲ: ರವೀಂದ್ರ ಶ್ರೀಕಂಠಯ್ಯ

– ಅಂಬರೀಶ್ ಕಾಲದಲ್ಲಿಯೇ ಅಕ್ರಮ ಗಣಿಗಾರಿಕೆ ನಡೆದಿರೋದು

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್ ನಟೋರಿಯಸ್, ಅವರು ಸಂಸದ ಸ್ಥಾನಕ್ಕೆ ಆರ್ಹರಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ತಿರುಗೇಟು ನೀಡಿದ್ದಾರೆ.

ಪಬ್ಲಿಕ್ ಟಿವಿ ಜೊತೆ ಮಾತನಾಡಿದ ರವೀಂದ್ರ ಶ್ರೀಕಂಠಯ್ಯ, ಸುಮಲತಾ ಅವರು ತಮ್ಮ ಕ್ರಿಮಿನಲ್ ಮೈಂಡ್ ಅನ್ನು ಚಿತ್ರರಂಗದಲ್ಲಿ ಬಳಸಲಿ. ರಾಜಕಾರಣಕ್ಕೆ ಕ್ರಿಮಿನಲ್ ಮೈಂಡ್ ಅಪ್ಲೇ ಮಾಡಬೇಡಿ. ಸುಮಲತಾ ಅವರು ಡ್ಯಾಂ ಬಿರುಕು ಬಿಟ್ಟಿದೆ ಅಂತಾ ನೂರು ಬಾರಿ ಹೇಳಿ ಆಣೆಕಟ್ಟಿಗೆ ದೃಷ್ಟಿಯಾಗಿಸಿದ್ದಾರೆ. ಎಂಪಿಯವರ ಕೆಟ್ಟು ಕಣ್ಣು ನಮ್ಮ ಆಣೆಕಟ್ಟೆಗೆ ತಾಗಿದೆ. ಹಾಗಾಗಿ ಡ್ಯಾಂನಲ್ಲಿ ಪೂಜೆ ಮಾಡಿಸೋದಕ್ಕೆ ಹೇಳಿದ್ದೇನೆ ಎಂದು ವ್ಯಂಗ್ಯ ಮಾಡಿದರು.

1995-2008ರಲ್ಲಿ ಅಂಬರೀಶ್ ಸಂಸದರಾಗಿದ್ದಾಗಲೇ ಮಂಡ್ಯ ಹಂಗರಹಳ್ಳಿಯಲ್ಲಿ ಅಕ್ರಮ ಗಣಿಗಾರಿಕೆ ಶುರುವಾಗಿತ್ತು. ಈಗ ಅದೇ ಅಂಬರೀಶ್ ಅವರ ಅಕ್ರಮ ಗಣಿಗಾರಿಕೆ ಬಗ್ಗೆ ಮಾತಾಡ್ತಾ ಇದ್ದೀರಾ? ನೀವು ಮೊದಲು ನಿಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಿ. ನಿನ್ನೆ ನೋಡಿದ ಹಳ್ಳ-ಕೊಳ್ಳಗಳೆಲ್ಲ ಅಂಬರೀಶ್ ಅವರ ಕಾಲದಲ್ಲಿ ಆಗಿರೋದು. ಹಂಗರಹಳ್ಳಿಯಲ್ಲಿ 2007ರ ಹಿಂದೆ ಅಕ್ರಮ ಗಣಿಗಾರಿಕೆ ನಡೆದಿದೆ. ಅಂಬರೀಶ್ ಅವರ ಕಾಲದಲ್ಲಿಯೇ ಅಕ್ರಮ ದಾಳಿ ನಡೆದಿರೋದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಸಂಸದರ ಎಲ್ಲ ಡೀಲ್ ಗಳ ಸಾಕ್ಷಿಗಳು ನಮ್ಮ ಬಳಿಯಲ್ಲಿದ್ದು, ಸಮಯ ಬಂದಾಗ ಬಿಡುಗಡೆ ಮಾಡೋದಾಗಿ ಹೇಳಿದರು.

ಅದು ಸಂಸದರ ವ್ಯಕ್ತಿತ್ವವನ್ನು ತೋರಿಸುತ್ತೆ:
ಈ ಹಿಂದೆ ಸುನಂದಾ ಜಯರಾಂನಂತಹ ರೈತ ಮಹಿಳೆಯರು ಅಹೋರಾತ್ರಿ ಧರಣಿ ಮಾಡಿ ಆಣೆಕಟ್ಟು ಕಾಪಾಡಿಕೊಂಡಿದ್ದರು. ಆ ರೀತಿ ರೈತ ಭಾಷೆಯಲ್ಲಿ ಕುಮಾರಣ್ಣ ಮಾತಾನಾಡಿದ್ರೆ, ಇವರೇ ಬೇರೆ ವ್ಯಾಖ್ಯಾನಿಸಿಕೊಂಡಿದ್ದಾರೆ. ಸಂಸದರು ಇಷ್ಟು ನೀಚಮಟ್ಟದಲ್ಲಿ ಅರ್ಥೈಸಿಕೊಂಡಿರುವ ಕಲ್ಪನೆ ಕುಮಾರಣ್ಣನಿಗೆ ಇರಲಿಲ್ಲ. ಅವರೇ ಬೇರೆ ಅರ್ಥೈಸಿಕೊಂಡು ಮಾತಾಡ್ತಿರೋದು ಅದು ಸಂಸದರ ವ್ಯಕ್ತಿತ್ವವನ್ನು ತೋರಿಸುತ್ತೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಅಂಬರೀಶ್ ಮುಂದೆ ಹೆಚ್‍ಡಿಕೆ ಕೈಕಟ್ಟಿ ನಿಂತ ಫೋಟೋ ವೈರಲ್

ಆಣೆಕಟ್ಟಿನ 20 ಕಿ.ಮೀ.ವ್ಯಾಪ್ತಿಯಲ್ಲಿ ಮೈನಿಂಗ್ ಮಾಡಬಾರದು ಅಂತ ಕುಮಾರಸ್ವಾಮಿ ಅವರು ಕಾನೂನು ಮಾಡಿದ್ದರು. ಆದ್ರೆ ನಿನ್ನೆ ಸಂಸದರು 30 ಕಿಲೋ ಮೀಟರ್ ದೂರದಲ್ಲಿರುವ ಗಣಿಗಾರಿಕೆಗಳಿಗೆ ಭೇಟಿ ನೀಡಿದ್ದಾರೆ. ಮೊದಲು 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿರುವ ಅಕ್ರಮ ಗಣಿಗಾರಿಕೆ ಬಂದು ನೋಡಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಅಂಬರೀಶ್ ಪಾರ್ಥಿವ ಶವ ತಂದಿದ್ದೇ ಹೆಚ್‍ಡಿಕೆ, ಆ ಫೋಟೋವನ್ನೂ ವೈರಲ್ ಮಾಡ್ಲಿ: ಕೆಟಿಎಸ್ ಆಗ್ರಹ

ನಾನು ನಮ್ಮ ಬಳಿ ರಾಜಕೀಯದಲ್ಲಿ ಪ್ರಜ್ವಲ್, ನಿಖಿಲ್ ಎಂಬ ಮಿಸೈಲ್ ಇವೆ ಅಂತಾ ಹೇಳಿದ್ದೆ. ಆದ್ರೆ ಅದನ್ನು ನೀವು ನಿಮ್ಮ ನಟೋರಿಯಸ್ ಬುದ್ಧಿ ಮೂಲಕ ತಿರುಚಿದ್ದಿರಿ. ನೀವು ಸಂಸದ ಸ್ಥಾನಕ್ಕೆ ಅರ್ಹರಲ್ಲ. ನೀವು ಬೆಂಗಳೂರಿನ ಹೋಟೆಲ್ ಗೆ ನಿಮ್ಮ ಇಬ್ಬರು ಬೆಂಬಲಿಗರನ್ನು ಯಾವ ಡೀಲ್ ಕಳಿಸಿದ್ರಿ ಎಂಬ ಸಾಕ್ಷಿ ನಮ್ಮ ಬಳಿ ಇದೆ ಎಂದು ಆರೋಪಿಸಿದರು. ಇದನ್ನೂ ಓದಿ: ಮಂಡ್ಯದಲ್ಲಿ ಸುಮಲತಾ V/S ಕುಮಾರಸ್ವಾಮಿ – ಹೆಚ್‍ಡಿಕೆ ಪರ ಪ್ರತಾಪ್ ಸಿಂಹ ಬ್ಯಾಟಿಂಗ್

 

Comments

Leave a Reply

Your email address will not be published. Required fields are marked *