ಸಿರಿಗೆರೆಯ ಶ್ರೀಗಳಿಂದ ಬ್ಯಾಡಗಿ ಆಸ್ಪತ್ರೆಗೆ 36 ಜಂಬೂ ಆಕ್ಸಿಜನ್ ಸಿಲಿಂಡರ್

ಹಾವೇರಿ: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಅಬ್ಬರ ಹೆಚ್ಚಾಗುತ್ತಿವೆ. ಆಕ್ಸಿಜನ್ ಬೆಡ್‍ಗಳು, ಆಕ್ಸಿಜನ್ ಸಮಸ್ಯೆಯಿಂದ ಪರದಾಡುವ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ. ಹೀಗಿರುವಾಗ ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳಿಂದ ಬ್ಯಾಡಗಿ ಆಸ್ಪತ್ರೆಗೆ 36 ಜಂಬೂ ಆಕ್ಸಿಜನ್ ಸಿಲಿಂಡರ್ ನೀಡಿದ್ದಾರೆ.

ಹಾವೇರಿ ಜಿಲ್ಲೆ ಬ್ಯಾಡಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ 36 ಜಂಬೂ ಆಕ್ಸಿಜನ್ ಸಿಲಿಂಡರ್ ನೀಡಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಆಕ್ಸಿಜನ್ ಪ್ರಮಾಣ ಸಹ ಹೆಚ್ಚಾಗುತ್ತಿದೆ. ಸೋಂಕಿತರಿಗೆ ತೊಂದರೆ ಆಗಬಹುದು ಎನ್ನುವ ಉದ್ದೇಶದಿಂದ ಶ್ರೀಗಳು 36 ಜಂಬೊ ಆಕ್ಸಿಜನ್ ಸಿಲಿಂಡರ್ ಕಳಿಸಿದ್ದಾರೆ.

ಹರಿಹರ ಸರಟನ್ ಆಕ್ಸಿಜನ್ ಕಂಪನಿಯಿಂದ ನಿನ್ನೆ 8 ಆಕ್ಸಿಜನ್ ಸಿಲಿಂಡರ್ ಇವತ್ತು 28 ಆಕ್ಸಿಜನ್ ಸಿಲಿಂಡರ್ ಬ್ಯಾಡಗಿ ಆಸ್ಪತ್ರೆಗೆ ಕಳಿಸಿದ್ದಾರೆ. ಸಿರಿಗೆರೆಯ ಡಾ.ಶಿವಮೂರ್ತಿ ಶಿವಾಚಾರ್ಯ ಕಾರ್ಯಕ್ಕೆ ಜಿಲ್ಲೆಯ ಜನರು ಧನ್ಯವಾದ ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *