ಸಿಡಿ ಇದೆ ಅನ್ನೋದು ಗೊತ್ತಿರಬೇಕು ಅವರಿಗೆ: ಸಿದ್ದರಾಮಯ್ಯ

ಬೆಂಗಳೂರು: ರಾಜಕೀಯ ಷಡ್ಯಂತ್ರ ಎಂದು ಹೇಳಲು ಸಿಡಿ ಇರವುದು ಗೊತ್ತಿರ ಬೇಕು ಅಲ್ವಾ ಅವರಿಗೆ ಬಿಜೆಪಿ ಸರ್ಕಾರದಲ್ಲಿ ಎಲ್ಲರೂ ಕಳ್ಳರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ರಾಸಲೀಲೆ ಪ್ರಕರಣ ಕುರಿತಾಗಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಪಕ್ಷ ಬಿಟ್ಟು ಹೋಗಿರುವವರ ಬಗ್ಗೆ ನಮಗೆ ಅನುಕಂಪ ಬರುತ್ತಾ? ಸರ್ಕಾರ ಬೀಳಿಸಿದವರ ಬಗ್ಗೆ ನನಗೆ ಯಾವುದೇ ಅನುಕಂಪ ಇಲ್ಲ. ಅವರಿಗೆ ಸಿಡಿ ಇರುವುದು ಮೊದಲೇ ಗೊತ್ತಿರಬೇಕು ಎಂದು ಬಾಂಬೆ ಫ್ರೆಂಡ್ಸ್‍ಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಕೋರ್ಟ್ ಮೋರೆ ಹೋಗಿರುವವರ ಕುರಿತಾಗಿ ನನಗೆ ಯಾವುದೇ ಮಾಹಿತಿ ಇಲ್ಲ. ಬಿಜೆಪಿಯಲ್ಲಿ ಎಲ್ಲರೂ ಕಳ್ಳರೆ ಆಗಿದ್ದಾರೆ. ಸಾಚಾ, ಪ್ರಾಮಾಣಿಕ ಅಂತ ಯಾರಿಲ್ಲ. ಅವರಿಗೆ ಸಿಡಿ ಇದೆ ಎಂದು ಗೊತ್ತಿರ ಬೇಕು ಹಾಗಿದ್ದರೆ ಎಂದು ಹೇಳಿದ್ದಾರೆ.

Comments

Leave a Reply

Your email address will not be published. Required fields are marked *