ಸಿಎಂ ಹುದ್ದೆ ಗುದ್ದಾಟ ಇದೊಂದು ತಿರುಕನ ಕನಸು- ಡಿಕೆಶಿ, ಸಿದ್ದುಗೆ ಹೊರಟ್ಟಿ ಟಾಂಗ್

– ಎಲ್ಲರೂ ಕನಸುಗಾರರೇ ಕನಸು ಕಾಣಲಿ

ಗದಗ: ರಾಜ್ಯದ ರಾಜಕಾರಣದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ಆಗುತ್ತಿಲ್ಲ. ಎಲ್ಲ ಪಕ್ಷದಲ್ಲೂ ಗೊಂದಲಗಳೇ ಕೂಡಿದೆ. ಇದನ್ನೇಲ್ಲಾ ಯೋಚನೆ ಮಾಡಿದರೆ ರಾಜಕಾರಣ ಮಾಡದಿರುವುದೇ ಉತ್ತಮ ಎನಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದ್ದಾರೆ.

ಸಿಎಂ ಖುರ್ಚಿ ವಿಚಾರವಾಗಿ ಕಾಂಗ್ರೆಸ್ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಹೊರಟ್ಟಿ ಅವರು, ಸಿಎಂ ಹುದ್ದೆ ಗುದ್ದಾಟ ಇದೊಂದು ತಿರುಕನ ಕನಸು. ಕನಸಿನಲ್ಲಿ ಮುಖ್ಯಮಂತ್ರಿ ಆಗೋದು ತಪ್ಪಲ್ಲ. ತಿರುಕನೂ ಸಹ ಕನಸಿನಲ್ಲಿ ರಾಜನಾಗಿರುತ್ತಾನೆ. ಎಲ್ಲರೂ ಕನಸುಗಾರರೇ ಕನಸು ಕಾಣಲಿ ಬಿಡಿ. ನಾನೂ ಕೂಡ ಕನಸುಗಾರನೇ. ಸಿಎಂ ಹುದ್ದೆ ಕನಸು ಕಾಣುವ ನನ್ನ ಆದಿಯಾಗಿ ಎಲ್ಲರೂ ತಿರುಕರೇ ಎಂದರು.

ಈಗಿನ ರಾಜ್ಯ ರಾಜಕೀಯದಲ್ಲಿ ಯಾವುದೂ ಸರಿಯಾಗಿಲ್ಲ. ಕೆಲಸ ಮಾಡಿದ ನಾಯಕರಿಗೆ ಎಲ್ಲೂ ಬೆಲೆ ಇಲ್ಲ. ಇದನ್ನೆಲ್ಲಾ ಗಮಿಸಿದರೇ ರಾಜಕಾರಣ ಮಾಡೋದು ಬೇಡ ಅನ್ನಿಸುತ್ತೆ ಎಂದು ರಾಜಕೀಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆ ಮೂಲಕ ರಾಜಕೀಯ ನಿವೃತ್ತಿ ಹೊಂದುತ್ತಾರೆಯೇ ಎಂಬ ಅನುಮಾನ ಮೂಡಿದೆ.

Comments

Leave a Reply

Your email address will not be published. Required fields are marked *