ಸಿಎಂ ಬಿಎಸ್‍ವೈಗೆ ಕೊರೊನಾ ನೆಗೆಟಿವ್- ಕಾವೇರಿ ನಿವಾಸಕ್ಕೆ ವಾಪಸ್

– ರೆಸ್ಟ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಇದೀಗ ಕೊರೊನಾ ನೆಗೆಟಿವ್ ಬಂದಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸಿಎಂಗೆ ಆರು ದಿನಗಳ ಆಸ್ಪತ್ರೆ ವಾಸ್ತವ್ಯ ಮುಕ್ತಾಯಗೊಳಿಸಿ ಇಂದು ತಮ್ಮ ಕಾವೇರಿ ನಿವಾಸಕ್ಕೆ ಮರಳಿದ್ದಾರೆ. ಕಳೆದ ಶುಕ್ರವಾರ ಎರಡನೇ ಬಾರಿ ಕೊರೊನಾ ಪಾಸಿಟಿವ್ ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು.

ಡಿಸ್ಚಾರ್ಜ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರೆಸ್ಟ್ ತಗೊಳೋ ಪ್ರಶ್ನೆಯೇ ಇಲ್ಲ. ಇಂದು ಸಂಜೆಯೇ ಸಚಿವ ಸಹೋದ್ಯೋಗಿಗಳ ಸಭೆ ಕರೆಯುತ್ತೇನೆ. ಕೋವಿಡ್ ನಿರ್ವಹಣೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು.

ನಾನು ನಿರಂತರವಾಗಿ ಸಿಎಸ್, ಸಚಿವರ ಜೊತೆ ಸಂಪರ್ಕದಲ್ಲಿದ್ದೆ. ಬಿಗಿಯಾದ ನಿಯಮಗಳನ್ನು ಕೈಗೊಂಡಿದ್ದೇವೆ. ಅದರ ಪಾಲನೆನೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಕೊರೊನಾ ದಿನೇ ದಿನೇ ಹೆಚ್ಚಾಗ್ತಿದೆ. ಒಂದು ಮನೇಲಿ 3-4 ಜನಕ್ಕೆ ಕೊರೊನಾ ಬರುತ್ತಿದೆ ಎಂದರು.

ಪ್ರಧಾನಿಯವರು ಹೇಳಿದಂತೆ, ಮಾಸ್ಕ್, ಅಂತರ ಬಿಟ್ರೆ ಬೇರೆ ಪರಿಹಾರ ಇಲ್ಲ. ಜನ ಮನೆಯಿಂದ ಹೊರಗೆ ಬರಬಾರದು. ಅನಗತ್ಯವಾಗಿ ಹೊರಗೆ ಬರೋದು ಬೇಡ ಜನ. ನಾವು ಬಿಗಿಯಾದ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ತಿಳಿಸಿದರು.

Comments

Leave a Reply

Your email address will not be published. Required fields are marked *