ಸಾರಿಗೆ ನೌಕರರೇ ಹಠ ಬಿಡಿ: ಸಿಎಂ ಮನವಿ

– ಬಸ್ ನಿಲ್ಲಿಸೋದು ಪರಿಹಾರವಲ್ಲ

ಬೆಳಗಾವಿ: ಪ್ರತಿಭಟನೆ ಕೈ ಬಿಡುವಂತೆ ಸಾರಿಗೆ ನೌಕರರಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

ನಗರದಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಾರಿಗೆ ನೌಕರರು ಹಠ ಬೀಡಬೇಕು. ಸಾರಿಗೆ ನೌಕರರಲ್ಲಿ ನಾನು ರಿಕ್ವೆಸ್ಟ್ ಮಾಡಿಕೊಳ್ಳುವುದು ಇಷ್ಟೇ 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ. ಯಾರದ್ದೋ ಮಾತು ಕೇಳಿಕೊಂಡ ಈ ಸತ್ಯಾಗ್ರಹ ಮಾಡಬೇಡಿ ಎಂದರು.

ಜನರ ಹಿತದೃಷ್ಟಿಯಿಂದ ಬಂದು ನೀವು ಸಹಕರಿಸಿ, ಕುಳಿತು ಮಾತನಾಡೋಣ. ಸಮಸ್ಯೆಗಳನ್ನು ಬಗೆಹರಿಸಲು ಬೇಕಾದಷ್ಟು ಅವಕಾಶಗಳಿವೆ. ಕೇವಲ ಬಸ್ ನಿಲ್ಲಿಸುವುದೇ ಪರಿಹಾರವಲ್ಲ. ಈ ಕೆಲಸ ನೀವು ಮಾಡಬಾರದು ಎಂಬ ವಿನಂತಿಯನ್ನು ಮಾಡುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ನಡೆಯುತ್ತಿರುವ ಉಪಚುನಾವಣೆ ಕುರಿತು ಮಾತನಾಡಿದ ಅವರು, ಕಾಂಗ್ರೆಸ್ಸಿಗೆ ಅಸ್ತಿತ್ವ ಇಲ್ಲಾ. ಕಳೆದ ಒಂದೂವರೆ ವರ್ಷಗಳ ಕಾಲ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಬೈ ಎಲೆಕ್ಷನ್‍ನಲ್ಲಿ 100ಕ್ಕೆ ನೂರು ಗೆಲ್ಲುತ್ತೇವೆ. ಬಜೆಟ್ ಚುನಾವಣೆ ಮೇಲೆ ಪರಿಣಾಮ ಬೀರುತ್ತದೆ ಎಂದು ಸಿಎಂ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *