ಸಾಕಿದ ನಾಯಿಯನ್ನು ಕಚ್ಚಿದ್ದಕ್ಕೆ ಬೀದಿ ನಾಯಿಯನ್ನೇ ಕೊಲೆಗೈದ

ಬೆಂಗಳೂರು: ತಾನು ಸಾಕಿದ ನಾಯಿಯನ್ನು ಬೀದಿ ನಾಯಿಯೊಂದು ಕಚ್ಚಿತೆಂದು ವ್ಯಕ್ತಿಯೊಬ್ಬ ನಾಯಿಯನ್ನು ಹೊಡೆದು ದರದರನೆ ಎಳೆದು ತಂದು ಬಿಸಾಕಿ ಅಮಾನವೀಯವಾಗಿ ನಡೆದುಕೊಂಡ ಘಟನೆ ನಗರದ ಹೆಬ್ಬಗೋಡಿ ಬಳಿಯ ಮಡಿವಾಳದಲ್ಲಿ ನಡೆದಿದೆ.

ಹೆಬ್ಬಗೋಡಿ ಬಳಿಯ ಮಡಿವಾಳದ ಮುಖ್ಯರಸ್ತೆಯಲ್ಲಿ ಮನೆ ನಾಯಿಯನ್ನು ಕಚ್ಚಿದೆ ಎಂದು ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಹೊಡೆದು ಕೊಲೆ ಮಾಡಿದ್ದಾನೆ. ವ್ಯಕ್ತಿ ಕುಡಿದ ಮತ್ತಿನಲ್ಲಿ ಮನೆ ನಾಯಿಯ ಜೊತೆ ಹೋಗುವಾಗ ಬೀದಿನಾಯಿ ಬೊಗಳಿ ಆತನ ನಾಯಿಗೆ ಕಚ್ಚಿದೆ. ಬಳಿಕ ನಾಯಿಯನ್ನು ಹಿಂಬಾಲಿಸಿಕೊಂಡು ಬೀದಿ ನಾಯಿ ಮನೆ ಬಳಿ ಹೋಗಿದ್ದಕ್ಕೆ ಸಿಟ್ಟಿಗೆದ್ದ ನಾಯಿ ಮಾಲೀಕ ಮನೆ ಬಳಿಯಿದ್ದ ಕಬ್ಬಿಣದ ರಾಡ್ ನಿಂದ ಬೀದಿ ನಾಯಿ ತಲೆಗೆ ಬೀಸಿ, ಬಳಿಕ ರಸ್ತೆಯಲ್ಲಿ ಎಳೆದೊಯ್ದು ಕ್ರೂರವಾಗಿ ನಡೆದುಕೊಂಡಿದ್ದಾನೆ. ಇದನ್ನೂ ಓದಿ: ಕಾಣೆಯಾಗಿದ್ದ ಚಿನ್ನದ ಸರ ನಾಯಿ ಮಲದಲ್ಲಿ ಪತ್ತೆ

ನಾಯಿಯನ್ನು ಕೊಂದು ರಸ್ತೆಯಲ್ಲಿ ಎಳೆದಾಡುತ್ತಿದ್ದಾಗ ಬೈಕ್ ನಲ್ಲಿ ಹೋಗುತ್ತಿದ್ದ ವ್ಯಕ್ತಿ ಇದನ್ನು ಪ್ರಶ್ನಿಸಿದ್ದಾರೆ. ಈ ಸಂದರ್ಭ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಈ ಬಗ್ಗೆ ಹೆಬ್ಬಗೋಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿರುವ ಯಲಹಂಕ ಪ್ರಾಣಿ ದಯಾ ಸಂಘದ ಅನಿರುದ್ದ್, ರಸ್ತೆಯ ಬದಿ ಬಿದ್ದಿದ್ದ ನಾಯಿಯನ್ನು ತೆಗೆದುಕೊಂಡು ಹೋಗಿ ಅಂತ್ಯಕ್ರಿಯೆ ಮಾಡಿದ್ದಾರೆ. ಘಟನೆ ಬಳಿಕ ಅಮಾನವೀಯವಾಗಿ ನಡೆದುಕೊಂಡ ವ್ಯಕ್ತಿ ತಲೆಮರೆಸಿಕೊಂಡಿದ್ದು ಪೋಲಿಸರು ಹುಡುಕಾಟ ನಡೆಸುತ್ತಿದ್ದಾರೆ.

Comments

Leave a Reply

Your email address will not be published. Required fields are marked *