ಸಲಾಡ್ ವಿತರಿಸಿದಾಗ ಈರುಳ್ಳಿ ಸ್ಲೈಸ್ ಕೇಳಿದ್ದೇ ತಪ್ಪಾಯ್ತು- ಚಾಕುವಿನಿಂದ ಇರಿದೇ ಬಿಟ್ಟ!

ನವದೆಹಲಿ: ಸಣ್ಣ ಸಣ್ಣ ವಿಚಾರಗಳಿಗೆ ಹಲ್ಲೆ ನಡೆಯುವುದು ಸಾಮಾನ್ಯ. ಇದೀಗ ಅಂತದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.

ಹಲ್ಲೆಗೊಳಗಾದವನನ್ನು ಪವನ್(60) ಎಂದು ಗುರುತಿಸಲಾಗಿದೆ. ಈತನ ಮೇಲೆ ರಿಯಾಸತ್ ಅಲಿ(59) ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಮೂಲತಃ ಉತ್ತರಪ್ರದೇಶದ ರಿಯಾಸತ್ ಅಲಿ ಕಳೆದ 30 ವರ್ಷಗಳಿಂದ ದೆಹಲಿಯ ಫತೇಫುರ್ ಬೇರಿಯಲ್ಲಿರುವ ಅಲಿ, ಫಾರ್ಮ್ ನಲ್ಲಿ ಕೆಲಸ ಮಾಡುತ್ತಿದ್ದಾನೆ.

ಡಿಸೆಂಬರ್ 8ರಂದು ಊಟದ ವೇಳೆ ಇನ್ನೊಬ್ಬ ಕಾರ್ಮಿಕ ಪವನ್ ಎಂಬಾತ ಈರುಳ್ಳಿ ಸ್ಲೈಸ್ ಸ್ವಲ್ಪ ಜಾಸ್ತಿ ನೀಡಿ ಎಂದು ಕೇಳಿದ್ದ. ಇಷ್ಟಕ್ಕೆ ಸಿಟ್ಟಿಗೆದ್ದ ಅಲಿ ಅಲ್ಲಿಯೇ ಇದ್ದ ಚಾಕುವಿನಿಂದ ಪವನ್ ಗೆ ಇರಿದು ಪರಾರಿಯಾಗಿದ್ದಾನೆ. ಅಲ್ಲದೆ ಕೈಯಲ್ಲಿದ್ದ ಚಾಕುವನ್ನು ಇನ್ನೊಂದು ಫಾರ್ಮ್ ನಲ್ಲಿ ಎಸೆದು ತಲೆಮರೆಸಿಕೊಂಡಿದ್ದ. ಚೂರಿ ಇರಿತದಿಂದ ಗಂಭೀರ ಗಾಯಗೊಂಡಿದ್ದ ಪವನ್ ನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಆರೋಪಿ ಹಾಗೂ ಕೃತ್ಯಕ್ಕೆ ಬಳಸಿದ ಚಾಕುವನ್ನು ಪೊಲಿಸರು ವಶಕ್ಕೆ ಪಡೆದುಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *