ಸರ ಕಳೆದುಕೊಂಡವರು ಕರೆ ಮಾಡಿ- ಆಟದ ಮೈದಾನದಲ್ಲಿ ವಿಭಿನ್ನ ಬೋರ್ಡ್

ಚಿಕ್ಕಮಗಳೂರು: ನಿಮ್ಮ ಸರ ನನ್ನ ಬಳಿ ಇದೆ. ಸರ ನಿಮ್ಮದೇ ಆಗಿದ್ದರೆ ಕಳೆದುಕೊಂಡವರು ನನಗೆ ಕರೆ ಮಾಡಿ ಎಂದು ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿ ಸರ ಸಿಕ್ಕವರು ಹಾಕಿರುವ ವಿಭಿನ್ನ ನಾಮಫಲಕ ಜನಮೆಚ್ಚುಗೆ ಪಾತ್ರವಾಗಿದೆ.

ಚಿಕ್ಕಮಗಳೂರು ತಾಲೂಕಿನ ಬೊಗಸೆ ಗ್ರಾಮದ ವಿನೋದ್ ಎಂಬವರಿಗೆ ಇದೇ ಫೆಬ್ರವರಿ 6ರಂದು ನಗರದ ಆಟದ ಮೈದಾನದಲ್ಲಿ ಸುಮಾರು 11 ಗ್ರಾಂ ಚಿನ್ನದ ಸರ ಸಿಕ್ಕಿತ್ತು. ಸರ ಸಿಕ್ಕಿದ ದಿನವೇ ಆಟದ ಮೈದಾನದ ಸುತ್ತ ಹಾಗೂ ಬೋಳರಾಮೇಶ್ವರ ದೇವಾಲಯದ ಅಕ್ಕಪಕ್ಕ ಸೇರಿ ಸುಮಾರು 15 ಕಡೆ ಚಿನ್ನದ ಸರ ಸಿಕ್ಕಿದೆ. ಕಳೆದುಕೊಂಡವರು ಕರೆ ಮಾಡಿ ಎಂದು ಬೋರ್ಡ್ ಹಾಕಿದ್ದರು.

ಏಳು ದಿನಗಳ ಬಳಿಕ ಬೋರ್ಡ್ ನೋಡಿ ಸರ ಕಳೆದುಕೊಂಡ ಪೊಲೀಸರ ಹೆಂಡತಿ ವಿನೋದ್ ಅವರಿಗೆ ಕರೆ ಮಾಡಿ ಅದು ನನ್ನ ಸರ ಎಂದು ಹೇಳಿದ್ದಾರೆ. ಅವರಿಂದ ಸ್ಪಷ್ಟನೆ ಪಡೆಯಲು ಹಲವು ರೀತಿಯ ಪ್ರಶ್ನೆಗಳನ್ನೂ ಕೇಳಿದ್ದಾರೆ. ಎಷ್ಟು ಗ್ರಾಂ ಇತ್ತು, ಮಾರ್ಕ್ ಎಲ್ಲಿತ್ತು ಎಂದು ಪ್ರಶ್ನೆ ಕೇಳಿದ್ದಾರೆ. ಸರ ಕಳೆದುಕೊಂಡ ಪೊಲೀಸರ ಹೆಂಡತಿ ಎಲ್ಲಾ ಮಾಹಿತಿ ನೀಡಿದ್ದಾರೆ. ಜೊತೆಗೆ ಸರ ಖರೀದಿ ಮಾಡಿದ ಬಗ್ಗೆ ಎಲ್ಲಾ ದಾಖಲೆಗಳನ್ನೂ ಕೊಡುವುದಾಗಿ ಹೇಳಿದ್ದಾರೆ. ಆಗ ಸರ ಅವರದ್ದೇ ಎಂದು ಕನ್ಫರ್ಮ್ ಆದ ಹಿನ್ನೆಲೆ ಅವರಿಗೆ ಸರವನ್ನ ಹಿಂದಿರುಗಿಸಲು ವಿನೋದ್ ಮುಂದಾಗಿದ್ದಾರೆ.

ಸಿಕ್ಕ ಚಿನ್ನದ ಸರವನ್ನ ಅವರಿಗೆ ಹಿಂದಿರುಗಿಸಲು ವಿನೋದ್ ಮಾಡಿದ ರೀತಿಯ ಜನ ಕೂಡ ಶ್ಲಾಘನೆ ವ್ಯಕ್ತಪಡಿಸಿ, ಯುವಕ ವಿನೋದ್ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ. ಸರ ಕಳೆದುಕೊಂಡವರು ಕೂಡ ವಿನೋದ್‍ಗೆ ಅಭಿನಂದನೆ ಸಲ್ಲಿಸಿದ್ದಾರೆ.

Comments

Leave a Reply

Your email address will not be published. Required fields are marked *