ಸರ್ಕಾರಿ ಆಸ್ಪತ್ರೆಗೆ ಸ್ಯಾನಿಟೈಸಿಂಗ್ ಮಾಡಿ – ಅಂಬುಲೆನ್ಸ್ ಡ್ರೈವರ್ ಆದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಕೊರೊನಾ ಆರ್ಭಟ ಹಿನ್ನಲೆಯಲ್ಲಿ ಶಾಸಕ ರೇಣುಕಾಚಾರ್ಯ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಆಸ್ಪತ್ರೆಗೆ ಸ್ಯಾನಿಟೈಸರ್ ಸಿಂಪಡನೆ ಮಾಡಿದರು. ಔಷಧಿ ಸಿಂಪಡನೆ ಯಂತ್ರ ಹಿಡಿದು ಸ್ವತಃ ಸ್ಯಾನಿಟೈಸರ್ ಮಾಡಿ ಸಮಾಜ ಮುಖಿ ಕೆಲಸ ಮಾಡಿದರು.

ಹೊನ್ನಾಳಿ-ನ್ಯಾಮತಿ ಜನರಿಗೆ ಉಚಿತ ಅಂಬುಲೆನ್ಸ್ ವ್ಯವಸ್ಥೆ ಮಾಡಿ ನಾಲ್ಕು ಅಂಬುಲೆನ್ಸ್‍ಗಳಿಗೆ ಚಾಲನೆ ನೀಡಲಾಯಿತು. ಶಾಸಕ ರೇಣುಕಾಚಾರ್ಯ ತಂದೆ ತಾಯಿಯ ಸವಿನೆನಪಿಗಾಗಿ ಉಚಿತವಾಗಿ ನಾಲ್ಕು ಅಂಬುಲೆನ್ಸ್ ಸೇವೆಗೆ ಚಾಲನೆ ನೀಡಿದರು.

ಈ ವೇಳೆ ಸಂಸದ ಜಿಎಂ ಸಿದ್ದೇಶ್ವರ್, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಭಾಗಿಯಾಗಿದ್ದರು. ಬಳಿಕ ಶಾಸಕ ರೇಣುಕಾಚಾರ್ಯ ಸ್ವತಃ ಅಂಬುಲೆನ್ಸ್ ಓಡಿಸಿದರು.

ಹೊನ್ನಾಳಿಯಲ್ಲಿ ಕೊರೊನಾ ಆರ್ಭಟಿಸುತ್ತಿರುವ ಬೆನ್ನಲ್ಲೇ ಸಿಎಂ ರಾಜಕೀಯ ಕಾರ್ಯದರ್ಶಿ ಶಾಸಕ ರೇಣುಕಾಚಾರ್ಯ ಹಗಲು ರಾತ್ರಿಯನ್ನದೇ ಕೊರೊನಾ ಮುನ್ನೆಚ್ಚರಿಕೆ ವಹಿಸುತ್ತಿರುವುದು ತಾಲೂಕಿನ ಜನರ ಪ್ರಶಂಸೆಗೆ ಪಾತ್ರವಾಗಿದೆ.

Comments

Leave a Reply

Your email address will not be published. Required fields are marked *