ಸಚಿವ ಸ್ಥಾನಕ್ಕಾಗಿ ದೆಹಲಿಯಲ್ಲಿ ಲಾಬಿಗೆ ಮುಂದಾದ ಹೆಚ್.ವಿಶ್ವನಾಥ್

– ಭೂಪೇಂದ್ರ ಯಾದವ್ ಮುಂದೆ ವಿಶ್ವನಾಥ್ ಮನವಿ

ನವದೆಹಲಿ: ಸಚಿವ ಸ್ಥಾನಕ್ಕಾಗಿ ಎಂಎಲ್‍ಸಿ ಹೆಚ್.ವಿಶ್ವನಾಥ್ ಲಾಬಿ ಮುಂದುವರಿಸಿದ್ದಾರೆ. ಇಂದು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಆಪ್ತ ಸಂಸಸದ ಭೂಪೇಂದ್ರ ಯಾದವ್ ಅವರನ್ನ ಭೇಟಿಯಾಗಿ ಬಿಜೆಪಿ ಪಕ್ಷದೊಳಗಿನ ಬೆಳವಣಿಗೆ ಮತ್ತು ಸಚಿವ ಸ್ಥಾನದ ಕುರಿತು ಚರ್ಚೆ ನಡೆಸಿದ್ದಾರೆ.

ಭೂಪೇಂದ್ರ ಯಾದವ್ ಭೇಟಿ ಕುರಿತು ಪ್ರತಿಕ್ರಿಯಿಸಿರುವ ಹೆಚ್.ವಿಶ್ವನಾಥ್, ನಾನು ಅಸೆಂಬ್ಲಿಯಿಂದ ಕೌನ್ಸಿಲ್ ಗೆ ಬರಬೇಕಿತ್ತು. ನನ್ನನ್ನು ನಾಮ ನಿರ್ದೇಶನ ಮಾಡಿದ್ದರಿಂದ ಸಚಿವ ಸ್ಥಾನ ಸೇರಿದಂತೆ ಹಲವು ಜವಾಬ್ದಾರಿ ತೆಗೆದುಕೊಳ್ಳಲು ಅಡ್ಡಿಯಾಗುತ್ತಿದೆ. ಈ ವ್ಯತ್ಯಾಸವನ್ನ ಸರಿ ಮಾಡುವಂತೆ ಕೇಳಿಕೊಂಡಿದ್ದೇನೆ. ಮೃತ ಧರ್ಮೇಗೌಡರ ಅವಧಿ ಇನ್ನೂ ಮೂರೂವರೆ ವರ್ಷ ಇದೆ. ಹಾಗಾಗಿ ಆ ಸ್ಥಾನಕ್ಕೆ ನನ್ನನ್ನು ಸೂಚಿಸಬೇಕೆಂದು. ನನ್ನ ಪರಿಷತ್ ಅವಧಿ ಇನ್ನೂ ಐದುವರೆ ವರ್ಷವಿದ್ದು, ಯಾರಿಗಾದರೂ ಕೊಡಬಹುದು ಎಂದು ಹೇಳಿದರು.

ಇದೇ ವೇಳೆ ರಾಜ್ಯದಲ್ಲಿ ಮೀಸಲಾತಿ ಹೋರಾಟಗಳು, ಬಿಜೆಪಿ ಪಕ್ಷದೊಳಗಿನ ಬೆಳವಣಿಗೆಯ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ್ದಾರೆ. ಸಚಿವ ಸ್ಥಾನ ವಂಚಿತರಾದಾಗಿನಿಂದಲೂ ವಿಶ್ವನಾಥ್ ಸಿಎಂ ಬಿಎಸ್‍ವೈ ಸರ್ಕಾರದ ವಿರುದ್ಧ ನೇರವಾಗಿ ವಾಗ್ದಾಳಿ ನಡೆಸುತ್ತಾ ಬಂದಿದ್ದಾರೆ.

Comments

Leave a Reply

Your email address will not be published. Required fields are marked *