ಶ್ರೀಶೈಲಕ್ಕೆ ಪಾದಯಾತ್ರೆ ತೆರಳಿದ್ದ ರಾಜ್ಯದ ಭಕ್ತ ನಲ್ಲಮಲ್ಲ ಅರಣ್ಯದಲ್ಲಿ ನಾಪತ್ತೆ

ಯಾದಗಿರಿ: ಶ್ರೀಶೈಲಕ್ಕೆ ಪಾದಯಾತ್ರೆ ತೆರಳುತ್ತಿರುವ ಭಕ್ತ ನಲ್ಲಮಲ್ಲ ಅರಣ್ಯದಲ್ಲಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿ ಐದು ದಿನ ಕಳೆದರೂ ಇನ್ನೂ ಕೂಡ ಭಕ್ತ ಪತ್ತೆಯಾಗಿಲ್ಲ. ಹೀಗಾಗಿ ರಾಜ್ಯದಿಂದ ಶ್ರೀಶೈಲಕ್ಕೆ ತೆರಳುತ್ತಿರುವ ಭಕ್ತರಲ್ಲಿ ಆತಂಕದ ಛಾಯೆ ಆವರಿಸಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಕೊಂಕಲ್ ಗ್ರಾಮದ ಹುಷೇನ್ ಸಾಬ್ ನಾಪತ್ತೆಯಾಗಿರುವ ಭಕ್ತ. ಯಾದಗಿರಿಯಿಂದ ಏಪ್ರಿಲ್ 2 ರಂದು ಗ್ರಾಮಸ್ಥರೊಂದಿಗೆ ಹುಷೇನ್ ಸಾಬ್ ಪಾದಯಾತ್ರೆ ಆರಂಭಿಸಿದ್ದು, ಏಪ್ರಿಲ್ 7 ರಂದು ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಗ್ರಾಮಸ್ಥರ ಗುಂಪಿನಿಂದ ತಪ್ಪಿಸಿಕೊಂಡಿದ್ದಾರೆ.

ಹೀಗೆ ತಪ್ಪಿಸಿಕೊಂಡಿರುವ ಹುಸೇನ್ ಸಾಬ ಐದು ದಿನವಾದ್ರು ಪತ್ತೆಯಾಗಿಲ್ಲ.ಇನ್ನೂ ಹುಸೇನ್ ಸಾಬ್ ಹುಡುಕಾಟಕ್ಕೆ ಆಂಧ್ರ ಪೋಲಿಸರು ನಿರ್ಲಕ್ಷ್ಯ ತೋರುವ ಆರೋಪವನ್ನು ಗ್ರಾಮಸ್ಥರು ಮಾಡುತ್ತಿದ್ದಾರೆ.

Comments

Leave a Reply

Your email address will not be published. Required fields are marked *