ವ್ಯಾಪಾರಿಯ ಮೆಕ್ಕೆಜೋಳದ ತಳ್ಳುವ ಗಾಡಿ ಬೀಳಿಸಿದ- ವಿಡಿಯೋ ವೈರಲ್

-ದರ್ಪ ಮೆರೆದ ಸಬ್ ಇನ್‍ಸ್ಪೆಕ್ಟರ್ ಅಮಾನತು

ಲಕ್ನೋ: ಸಬ್ ಇನ್‍ಸ್ಪೆಕ್ಟರ್ ರಸ್ತೆ ಬದಿಯಲ್ಲಿ ಮೆಕ್ಕೆಜೋಳ ಮಾರುತ್ತಿದ್ದ ವ್ಯಾಪಾರಿಯ ತಳ್ಳುವ ಗಾಡಿ ಬೀಳಿಸಿದ ದರ್ಪ ಮರೆದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋ ವೈರಲ್ ಬಳಿ ದರ್ಪ ಮೆರದ ಅಧಿಕಾರಿಯನ್ನು ಅಮಾನತುಗೊಳಿಸಲಾಗಿದೆ. ಇದನ್ನೂ ಓದಿ:  100 ರೂ. ಲಂಚ ನೀಡಲು ನಿರಾಕರಿಸಿದ ಬಾಲಕ- ಮೊಟ್ಟೆ ಬಂಡಿ ಪಲ್ಟಿ ಮಾಡಿದ ಪಾಲಿಕೆ ಅಧಿಕಾರಿ

ಉತ್ತರ ಪ್ರದೇಶದ ವಾರಾಣಸಿಯ ಶಿವಪುರದಲ್ಲಿ ಬೀದಿ ಬದಿ ವ್ಯಾಪಾರಿ ಗಾಡಿಯಲ್ಲಿ ಮೆಕ್ಕೆಜೋಳ ಮಾರುತ್ತಿದ್ದರು. ವ್ಯಾಪಾರಿ ಬಳಿ ಬಂದ ಸಬ್ ಇನ್‍ಸ್ಪೆಕ್ಟರ್ ಕುಮಾರರ ಶಶಿ ಗಾಡಿಯಲ್ಲಿದ್ದ ಜೋಳವನ್ನು ಕೆಳಗೆ ಬೀಳಿಸಿ, ನೋಡ ನೋಡುತ್ತಿದ್ದಂತೆ ಗಾಡಿ ಪಲ್ಟಿ ಹೊಡೆಸಿದ್ದಾನೆ. ಈ ಎಲ್ಲ ದೃಶ್ಯಗಳು ಕಟ್ಟಡ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸೋಮವಾರ ಘಟನೆ ನಡೆದಿದ್ದು, ವಿಡಿಯೋ ವೈರಲ್ ಬಳಿಕ ಮಂಗಳವಾರ ಕಿಶೋರ್ ಶಶಿಯನ್ನು ಅಮಾನತುಗೊಳಿಸಲಾಗಿದೆ. ಹಾಗೆ ಬೀದಿ ಬದಿ ವ್ಯಾಪಾರಿ ಬಳಿ ಪೊಲೀಸರು ಕ್ಷಮೆ ಕೇಳಿದ್ದಾರೆ. ಇದನ್ನೂ ಓದಿ: 100 ರೂ. ಲಂಚಕ್ಕಾಗಿ ಮೊಟ್ಟೆ ಬಂಡಿ ಪಲ್ಟಿ – ಬಾಲಕನಿಗೆ ಉಚಿತ ಶಿಕ್ಷಣ, ಮನೆ

ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಲು ಹಿರಿಯ ಅಧಿಕಾರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ. ಜೊತೆಗೆ ವ್ಯಾಪಾರಿಯಾದ ನಷ್ಟವನ್ನು ನೀಡುವಂತೆ ತಿಳಿಸಲಾಗಿದೆ. ಆದ್ರೆ ಕಿಶೋರ್ ಗಾಡಿಯನ್ನು ಯಾಕೆ ಬೀಳಿಸಿದ್ರು ಎಂಬುವುದು ಗೊತ್ತಿಲ್ಲ ಎಂದು ಹೆಸರು ಹೇಳಲು ಇಚ್ಛಿಸದ ಪೊಲೀಸ್ ಅಧಿಕಾರಿ ಮಾಧ್ಯಮಕ್ಕೆ ಹೇಳಿದ್ದಾರೆ. ಇದನ್ನೂ ಓದಿ: ಫ್ರೀಯಾಗಿ ಐಸ್ ಕ್ರೀಂ ಕೊಡದಕ್ಕೆ ಗಾಡಿ ತೊಗೊಂಡು ಹೋದ ಪೊಲೀಸರು

Comments

Leave a Reply

Your email address will not be published. Required fields are marked *