ವೈಷ್ಣವಿಯಂತೆ ಇನ್ನೊಬ್ಬರು ಮನೆಯಲ್ಲಿ ಮಾತನಾಡಲು ಸಾಧ್ಯವಿಲ್ಲ: ಸುದೀಪ್

ಭಾನುವಾರ ವಾರದ ಕಥೆ ಕಿಚ್ಚ ಸುದೀಪ್ ಜೊತೆ ಸಂಚಿಕೆಯಲ್ಲಿ ಕಿಚ್ಚ ಸುದೀಪ್‍ರವರು ವೈಷ್ಣವಿ ತರ ದೊಡ್ಮನೆಯಲ್ಲಿ ಯಾರೂ ಮಾತನಾಡಲು ಸಾಧ್ಯವಿಲ್ಲ ಎಂದು ವೈಷ್ಣವಿಯವರನ್ನು ಹೊಗಳುವ ಮೂಲಕ ಕಾಲೆಳೆದಿದ್ದಾರೆ.

ಪ್ರತಿವಾರದಂತೆ ಈ ವಾರ ಕೂಡ ಎಲಿಮಿನೇಷನ್ ಟೆನ್ಷನ್‍ನಲ್ಲಿ ಮನೆ ಮಂದಿ ಬ್ಯುಸಿಯಾಗಿದ್ದರು. ಸುದೀಪ್‍ರವರು ಬ್ರೇಕ್ ಮುಗಿಸಿಕೊಂಡು ಬಂದ ನಂತರ ಮನೆಯಲ್ಲಿ ಏನೋ ಕಾಮಿಡಿ ನಡೀತಿದೆ ಏನು ಎಂದು ಚಕ್ರವರ್ತಿಯವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಚಕ್ರವರ್ತಿಯವರು ಮಳೆ ಬರುತ್ತಿದೆ ಎಂದರೆ ಯಾರೋ ಮಹಾನ್ ವ್ಯಕ್ತಿ, ಪುಣ್ಯ ಪುರುಷರೇ ಬಿಗ್‍ಬಾಸ್ ಮನೆಯಿಂದ ಹೊರ ಹೋಗುತ್ತಾರೆ ಅನಿಸುತ್ತಿದೆ ಎಂದು ರಘುರವರ ಜೊತೆ ಮಾತನಾಡುತ್ತಿದ್ದೆ ಹೇಳುತ್ತಿದೆ.

ನಾನು ಬ್ರೇಕ್ ಹೋಗುವ ಮುನ್ನ ದಿವ್ಯಾ ಸುರೇಶ್, ವೈಷ್ಣವಿ, ಪ್ರಿಯಾಂಕ ಇವರಲ್ಲಿ ಒಬ್ಬರನ್ನು ಸೇವ್ ಮಾಡುವುದಾಗಿ ಹೇಳಿದ್ದೆ. ಈ ಮೂವರಲ್ಲಿ ನೀವು ಹೇಳುತ್ತಿರುವ ವ್ಯಕ್ತಿ ಇದ್ದಾರಾ ಎಂದು ಸುದೀಪ್ ಕೇಳುತ್ತಾರೆ. ಆಗ ಚಕ್ರವರ್ತಿಯವರು ಸುಮ್ಮನೆ ಒಂದು ಊಹೆ ಅಷ್ಟೇ ಸರ್ ಎಂದಾಗ ಸುದೀಪ್‍ರವರು ನಿಮ್ಮ ಆಸೆಯನ್ನು ಈಡೇರಿಸುತ್ತೇವೆ ಎನ್ನುತ್ತಾರೆ. ಬಳಿಕ ಮಹಿಳೆ ಎಂದರೆ ತಪ್ಪಾಗುತ್ತದೆ ಸರ್, ಪಕ್ಕದಲ್ಲಿ ವೈಷ್ಣವಿಯವರು ಕುಳಿತಿದ್ದಾರೆ. ಅವರಿಂದ ಸ್ವಲ್ಪ ವಿದ್ಯೆ ಬಂದಿದೆ. ಇನ್ಮುಂದೆ ವೈಷ್ಣವಿ ರೀತಿ ಮಾತನಾಡಬೇಕು ಎಂದು ಡಿಸೈಡ್ ಮಾಡಿದ್ದೇನೆ. ಅವರನ್ನು ಗುರುವಾಗಿ ತೆಗೆದುಕೊಂಡಿದ್ದೇನೆ ಎಂದಿದ್ದಾರೆ.

ಇದಕ್ಕೆ ಸುದೀಪ್, ವೈಷ್ಣವಿ ತರ ಇನ್ನೊಬ್ಬರು ಈ ಮನೆಯಲ್ಲಿ ಮಾತನಾಡುವುದಕ್ಕೆ ಸಾಧ್ಯವಿಲ್ಲ, ಸಾಧ್ಯವಿಲ್ಲ, ಸಾಧ್ಯವಿಲ್ಲ ಎಂದು ಹೇಳುತ್ತಾ ನಗುತ್ತಾರೆ. ಈ ವೇಳೆ ವೈಷ್ಣವಿ ಯಾಕೆ ಸರ್ ಎಂದು ಕೇಳಿದಾಗ, ಅಂದರೆ ನಾನು ನಿಮಗೆ ಕಾಂಪ್ಲಿಮೆಂಟ್ ನೀಡುತ್ತಿದ್ದೇನೆ. ನೀವು ಹೇಳುವುದು ನನಗೆ ಅರ್ಥವಾಗುವುದಕ್ಕೆ ಅಷ್ಟು ವಾರ ಬೇಕಾಯಿತು. ಚಕ್ರವರ್ತಿಯವರಿಗೆ ಯಾಕೆ ನಿಮ್ಮ ರೀತಿ ಮಾತನಾಡಲು ಆಗುವುದಿಲ್ಲ ಎಂದರೆ ಅವರು ಬಳಸುವ ಪದ ಸೂಕ್ಷ್ಮವಾಗಿ ಇರುವುದಿಲ್ಲ ಅದೇ ನಿಜವನ್ನು ಹೇಳಿ ಬಿಡುತ್ತದೆ. ಆದರೆ ನೀವು ಏನು ಹೇಳುವುದಿಲ್ಲ. ಬರೀ ಅಣ್ಣಾ ನಿಮಗೆ ಒಂದು ಮೆಡಲ್ ಹಾಕಬೇಕು ಎಂದು ಹೇಳುತ್ತೀರಾ ಅಷ್ಟೇ. ಅದನ್ನು ಕೇಳಿ ಎದುರುಗಡೆಯವರು ದಡ್ಡರಾಗಿದ್ದಾರೆ ನನ್ನ ಹೊಗಳುತ್ತಿದ್ದಾರೆ ಎಂದು ಅರ್ಥ ಮಾಡಿಕೊಂಡಿರುತ್ತಾರೆ. ಆದರೆ ನಿಮಗೆ ಹಾಗೂ ನಿಮ್ಮನ್ನು ಅರ್ಥ ಮಾಡಿಕೊಂಡವರಿಗೆ ಸತ್ಯಾಂಶ ಗೊತ್ತಿರುತ್ತದೆ ಎಂದು ಹೇಳುತ್ತಾ ಹಾಸ್ಯ ಮಾಡಿದ್ದಾರೆ.

ಕೊನೆಗೆ ಚಕ್ರವರ್ತಿಯವರ ಕೈಯಲ್ಲಿ ನಿಮ್ಮ ರೀತಿ ಇರಲು ಆಗುತ್ತಾ ಎಂದು ಸುದೀಪ್ ಕೇಳಿದಾಗ ಚಕ್ರವರ್ತಿಯವರೇ ಚಾನ್ಸೇ ಇಲ್ಲ ಎಂದು ಹೇಳುತ್ತಾ ನಗುತ್ತಾರೆ. ಇದನ್ನೂ ಓದಿ:ಬಿಗ್‍ಬಾಸ್ ಮನೆಯಿಂದ ರಘು ಔಟ್

Comments

Leave a Reply

Your email address will not be published. Required fields are marked *