ವಿಶಾಲ ಗಾಣಿಗ ಮರ್ಡರ್ ಕೇಸ್- ಪೊಲೀಸರ ನಾಲ್ಕು ತಂಡ ರಚನೆ

ಉಡುಪಿ: ಜಿಲ್ಲೆ ಬ್ರಹ್ಮಾವರದ ವಿಶಾಲ ಗಾಣಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ನಾಲ್ಕು ತಂಡ ರಚಿಸಲಾಗಿದೆ. ಉಡುಪಿ, ಮಣಿಪಾಲ ಮತ್ತು ಬ್ರಹ್ಮಾವರ ಪೊಲೀಸ್ ಠಾಣೆಯ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಜಾಲಾಡುತ್ತಿದ್ದು, ಆರೋಪಿಗೆ ಬಲೆ ಬೀಸಲಾಗಿದೆ.

ಬ್ರಹ್ಮಾವರ ತಾಲೂಕಿನ ಕುಂಬ್ರಗೋಡು ಎಂಬಲ್ಲಿನ ಮಿಲನ್ ಅಪಾರ್ಟ್ ಮೆಂಟ್ ನಲ್ಲಿ ಸೋಮವಾರ ಮಧ್ಯಾಹ್ನ ವಿಶಾಲ ಗಾಣಿಗ ಅವರ ಕೊಲೆಯಾಗಿತ್ತು. ಮಗಳು ಮನೆಗೆ ಬಂದಿಲ್ಲ ಎಂದು ಹುಡುಕುತ್ತಾ ಬಂದಿದ್ದ ತಂದೆ ವಾಸು ಗಾಣಿಗ ಘಟನೆಯನ್ನು ಮೊದಲು ನೋಡಿ ಬ್ರಹ್ಮಾವರ ಪೊಲೀಸರಿಗೆ ದೂರು ನೀಡಿದ್ದರು.

ಮಣಿಪಾಲದ ಕೆಎಂಸಿಯಲ್ಲಿ ಮೃತದೇಹದ ಮರಣೋತ್ತರ ಪರೀಕ್ಷೆ ನಡೆದಿದೆ. ಕೊಲೆಗಾರ ಮೃತ ದೇಹದಿಂದ ಚಿನ್ನದ ಬಳೆ, ಕರಿಮಣಿ ಸರ, ಕಿವಿಯೋಲೆ ಕದ್ದು ಪರಾರಿಯಾಗಿದ್ದಾನೆ. ಬ್ಯಾಂಕಿನಿಂದ ತಂದಿದ್ದ ನಗದಿನ ಜೊತೆ ಆರೋಪಿ ಪರಾರಿಯಾಗಿದ್ದು ಮಾಹಿತಿ ಇದ್ದವರೇ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ ಎಂಬ ಗುಮಾನಿ ಪೊಲೀಸರಿಗೆ ಇದೆ. ಇದನ್ನೂ ಓದಿ: ದೇಶದ ಮೊದಲ ಕೊರೊನಾ ಸೋಂಕಿತನಿಗೆ ಮತ್ತೆ ತಗುಲಿದ ಸೋಂಕು

ಮಿಲನ್ ಅಪಾರ್ಟ್ ಮೆಂಟ್ ಹೊಸದಾಗಿ ನಿರ್ಮಾಣವಾಗಿದ್ದು ಕಟ್ಟಡಕ್ಕೆ ಇನ್ನೂ ಸಿಸಿಟಿವಿ ಅಳವಡಿಸಿರಲಿಲ್ಲ. ಆರೋಪಿ ಪತ್ತೆಗೆ ಇದು ಸವಾಲಾಗಿದೆ. ಅಪಾರ್ಟ್ ಮೆಂಟ್ ಸುತ್ತಲ ಕಟ್ಟಡಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಕೊಲೆ ಪ್ರಕರಣದಲ್ಲಿ ಮಹತ್ವದ ಸುಳಿವು ಲಭ್ಯವಾಗಿದ್ದು, ಶೀಘ್ರ ಆರೋಪಿ ಬಂಧನ ಮಾಡುತ್ತೇವೆ ಎಂದು ಎಸ್.ಪಿ. ವಿಷ್ಣುವರ್ಧನ್ ಮಾಹಿತಿ ನೀಡಿದರು. ಇದನ್ನೂ ಓದಿ: ವಾರದ ಹಿಂದೆ ದುಬೈನಿಂದ ಉಡುಪಿಗೆ ಬಂದಿದ್ದ ಮಹಿಳೆ ನಿಗೂಢ ಸಾವು

Comments

Leave a Reply

Your email address will not be published. Required fields are marked *