ಲಾಕ್‍ಡೌನ್ ವೇಳೆ ಊರಿಗೆ ಹೋಗಿ ಮರಳಿ ಬಾರದ ಪತಿ- ಪೊಲೀಸರ ಮೊರೆಹೋದ ಪತ್ನಿ

– ಈಗ ನಿನ್ನ ಮೇಲೆ ಇಂಟರೆಸ್ಟ್ ಕಡಿಮೆ ಆಗಿದೆ ಬರೋದಿಲ್ಲ
– ಮದ್ವೆಯಾದ ಆರು ತಿಂಗಳಿಗೆ ಬಿಟ್ಟುಹೋದ ಗಂಡ

ಬೆಂಗಳೂರು: ಲಾಕ್‍ಡೌನ್ ವೇಳೆ ಊರಿಗೆ ಹೋದ ಪತಿರಾಯ ಮತ್ತೆ ವಾಪಸ್ ಬರದೇ ಇರುವುದರಿಂದ ಕಂಗಾಲ ಆದ ಪತ್ನಿ ಪೊಲೀಸ್ ಠಾಣೆಗೆ ದೂರು ನೀಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಆರು ತಿಂಗಳ ಹಿಂದೆಯಷ್ಟೆ ಸೋಮಶೇಖರ್ ಕಾರವಾರದಲ್ಲಿ ಯುವತಿಯನ್ನು ಮದುವೆಯಾಗಿದ್ದ. ನಂತರ ಆಕೆಯನ್ನು ಕರೆದುಕೊಂಡು ಬಂದು ಬೆಂಗಳೂರಿನಲ್ಲಿ ವಾಸವಿದ್ದ. ಆರು ತಿಂಗಳು ಸಂಸಾರ ಮಾಡಿದ್ದ ಸೋಮಶೇಖರ್, ಲಾಕ್‍ಡೌನ್ ನೇಪ ಹೇಳಿ ಹೆಂಡತಿಯನ್ನು ಬೆಂಗಳೂರಿನಲ್ಲಿ ಬಿಟ್ಟು ವಾಪಸ್ ಕಾರವಾರಗೆ ಹೋಗಿದ್ದ.

ಈಗ ಲಾಕ್‍ಡೌನ್ ಮುಗಿದರೂ ಆತ ವಾಪಸ್ ಬಂದಿಲ್ಲ. ಆತನಿಗೆ ಕರೆ ಮಾಡಿದರೆ, ಈಗ ನಿನ್ನ ಮೇಲೆ ಇಂಟರೆಸ್ಟ್ ಕಡಿಮೆ ಆಗಿದೆ ನಾನು ಬರುವುದಿಲ್ಲ ಎಂದು ಹೇಳುತ್ತಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಗಂಡ ಮಾಡಿದ ಆವಾಂತರದಿಂದ ಮನೆಯೂ ಖಾಲಿ ಮಾಡದೇ ಬಾಡಿಗೆ ಕಟ್ಟಲಾರದೇ ಯುವತಿ ಕಂಗಾಲಾಗಿದ್ದಾಳೆ. ಜೊತೆಗೆ ಗಂಡನನ್ನು ಕರೆಸಿಕೊಡುವಂತೆ ಸದ್ದಗುಂಟೆ ಠಾಣೆ ಪೊಲೀಸರ ಮೊರೆ ಹೋಗಿದ್ದಾಳೆ.

Comments

Leave a Reply

Your email address will not be published. Required fields are marked *