ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಸಿಲುಕಿದ ಕಲ್ಲಂಗಡಿ ಬೆಳೆಗಾರ- ರೈತನ ಬೆನ್ನಿಗೆ ನಿಂತ ಉಪೇಂದ್ರ

ಬೀದರ್: ಕೊರೊನಾ ಮಹಾಮಾರಿ ಅದೆಷ್ಟೋ ರೈತರ ಬದುಕನ್ನೇ ಕಿತ್ತುಕೊಂಡಿದೆ. ಸಾಲ ಮಾಡಿ ಬೆಳೆದ ಬೆಳೆಗೆ ಪ್ರತಿಫಲ ಸಿಗದೆ ಹಲವು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅದೇ ರೀತಿ ರೈತರೊಬ್ಬರು ಕಲ್ಲಂಗಡಿ ಮಾರಾಟ ಮಾಡಲಾಗದೆ ಕಂಗಾಲಾಗಿದ್ದಾರೆ. ಇವರ ನೆರವಿಗೆ ಇದೀಗ ನಟ ಉಪೇಂದ್ರ ಧಾವಿಸಿದ್ದಾರೆ.

ಜಿಲ್ಲೆಯ ಔರಾದ್ ತಾಲೂಕಿನ ತೇಗಂಪೂರ ಗ್ರಾಮದ ರೈತ ಶಿವು ಮೊಕ್ತೆದಾರ್ ಗೆ ನಟ ಉಪೇಂದ್ರ ಆರ್ಥಿಕ ವೆಚ್ಚದ ಭರವಸೆ ನೀಡಿದ್ದಾರೆ. ಒಟ್ಟು 2 ಎಕರೆ ಜಮೀನಿನಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಬೆಳೆದಿದ್ದ ಕಲ್ಲಂಗಡಿ ಮಾರಾಟ ಮಾಡಲಾಗಿದೆ ರೈತ ಕಂಗಾಲಾಗಿದ್ದರು. ರೈತನ ಆರ್ಥಿಕ ಸಂಕಷ್ಟದ ಬಗ್ಗೆ ಮಾಹಿತಿ ಪಡೆದ ನಟ ಉಪೇಂದ್ರ, ಆಪ್ತ ಸ್ನೇಹಿತ ರಾಜಾರಾಮ ಮೂಲಕ ಮಾತನಾಡಿಸಿ ಆರ್ಥಿಕ ಭರವಸೆ ನೀಡಿದ್ದಾರೆ. ನೀವು ಹೆದರಬೇಡಿ ನಿಮ್ಮೊಂದಿಗೆ ನಾವಿದ್ದೇವೆ. ನಿಮ್ಮ ಕಲ್ಲಂಗಡಿ ಹಣ್ಣು ಖರೀದಿ ಮಾಡಿ ನಿರ್ಗತಿಕರಿಗೆ, ಬಡವರಿಗೆ ಉಚಿತವಾಗಿ ಹಂಚಿಕೆ ಮಾಡುತ್ತೇವೆ ಎಂದು ಉಪೇಂದ್ರ ನೊಂದ ರೈತನ ಬೆನ್ನಿಗೆ ನಿಂತಿದ್ದಾರೆ.

ಲಾಕ್‍ಡೌನ್ ಹಿನ್ನೆಲೆ ನಾನು ಬೆಳೆದ ಕಲ್ಲಂಗಡಿ ಮಾರಾಟ ಮಾಡಲಾಗದೆ ಕಂಗಾಲಾಗಿದ್ದೆ. ಈ ಸಮಯದಲ್ಲಿ ನಟ ಉಪೇಂದ್ರ ನನ್ನ ಖರ್ಚು ವೆಚ್ಚಗಳನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದು ನೊಂದ ರೈತ ಶಿವು ಮೊಕ್ತೆದಾರ್ ಉಪೇಂದ್ರ ಮತ್ತು ಅವರ ತಂಡಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *