ಲಸಿಕೆ ಪಡೆಯಲು ಜನರ ಹಿಂದೇಟು-ಅಧಿಕಾರಿಗಳಿಗೆ ಮಹಿಳೆಯರಿಂದ ಅವಾಜ್

ಯಾದಗಿರಿ: ಕೊರೊನಾ ಲಸಿಕೆ ಜಾಗೃತಿಯನ್ನೂ ಮೂಡಿಸಲು ಬಂದಿರುವ ಅಧಿಕಾರಿಗಳಿಗೆ ಗ್ರಾಮದ ಮಹಿಳೆಯರಯ ತರಾಟೆಗೆ ತೆಗೆದುಕೊಂಡಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ತಾಲೂಕಿನ ಕಂಚಗಾರಹಳ್ಳಿಯಲ್ಲಿ ಗ್ರಾಮಸ್ಥರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಸಹಾಯಕ ಆಯುಕ್ತ ಪ್ರಕಾಶ್ ಹನಗಂಡಿ, ತಹಶಿಲ್ದಾರರ ಚನ್ನಮಲ್ಲಪ್ಪ ಮತ್ತು ಅವರ ತಂಡ ಜಾಗೃತಿ ಮೂಡಿಸಲು ಹಳ್ಳಿಗೆ ತೆರಳಿದ್ದರು. ಕೊರೊನಾ ಲಸಿಕೆ ಪಡೆಯಬೇಕೆಂದು ಬುದ್ದಿ ಮಾತು ಹೇಳಿದ್ದಾರೆ. ಆದರೆ ಗ್ರಾಮದ ಮಹಿಳೆಯರು ಮಾತ್ರ ಅಧಿಕಾರಿಗಳಿಗೆ ಅವಾಜ್ ಹಾಕಲು ಮುಂದಾಗಿದ್ದಾರೆ. ಇದನ್ನೂ ಓದಿ: 18 ವರ್ಷ ಮೇಲ್ಪಟ್ಟ ಎಲ್ಲರಿಗೂ ವ್ಯಾಕ್ಸಿನ್ ನೀಡುವ ಮೊದಲು ಶಾಲೆ ಆರಂಭ ಬೇಡ: ಪ್ರತಾಪ್ ಸಿಂಹ

ಮತ್ತೊಂದು ಕಡೆ ಅಧಿಕಾರಿಗಳು ಮನೆಮುಂದೆ ಬಂದ ತಕ್ಷಣ ಬೀಗ ಹಾಕಿ ಗ್ರಾಮಸ್ಥರು ಬೇರೆಕಡೆಗೆ ಪರಾರಿಯಾಗುತ್ತಿದ್ದಾರೆ. ನಾವು ಲಸಿಕೆ ಹಾಕಿಸಿಕೊಳ್ಳಲ್ಲ, ಸತ್ತರೇ ಇಲ್ಲೇ ಸಾಯುತ್ತೆವೆ ಆದರೆ ಲಸಿಕೆ ಹಾಕಿಸಿಕೊಳ್ಳಲ್ಲ ಎನ್ನುತ್ತಿದ್ದಾರೆ. ಕರೆಂಟ್, ರೇಷನ್ ಕಾರ್ಡ್ ಕಟ್ ಮಾಡಿದರೂ ಪರವಾಗಿಲ್ಲ, ನಾವು ಸರ್ಕಾರ ನಂಬಿ ಬದುಕುತ್ತಿಲ್ಲ, ನಾವು ಸ್ವಂತ ದುಡಿದು ಬದುಕುತ್ತೆವೆ ಎಂದು ಅಧಿಕಾರಿಗಳ ಮುಂದೆ ಗ್ರಾಮೀಣ ಮಹಿಳೆಯರು ರಂಪಾಟ ನಡೆಸಿದ್ದಾರೆ.

Comments

Leave a Reply

Your email address will not be published. Required fields are marked *