ರೇಖಾ ಕದಿರೇಶ್ ಹತ್ಯೆ ಹಿಂದೆ ನಾದಿನಿ ಕೈವಾಡ? – ನಾದಿನಿ ಮಾಲಾ, ಮಗ ಅರುಳ್ ಅರೆಸ್ಟ್

ಬೆಂಗಳೂರು: ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಮತ್ತೊಂದು ಮೇಜರ್ ಟ್ವಿಸ್ಟ್ ಸಿಕ್ಕಿದೆ. ರೇಖಾ ಕೊಲೆಯಾದ ದಿನ ಕಣ್ಣೀರು ಹಾಕ್ತಿದ್ದ ನಾದಿನಿ ಮಾಲ ಮತ್ತು ಮಗ ಅರುಳನೇ ಕೊಲೆ ಹಿಂದಿನ ಮಾಸ್ಟರ್ ಮೈಂಡ್ ಗಳು ಅನ್ನೋ ಶಾಕಿಂಗ್ ವಿಚಾರ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ

ವರಸೆಯಲ್ಲಿ ರೇಖಾ ಕದಿರೇಶ್‍ಗೆ ನಾದಿಯಾಗಬೇಕು. ರೇಖಾ ಕೊಲೆಯಾದ ದಿನ ಮಾಲಾ ಓವರ್ ಆಕ್ಟಿಂಗ್ ಮಾಡಿ ಕಣ್ಣೀರು ಹಾಕುವಾಗಲೇ ಪೊಲೀಸರಿಗೆ ಡೌಟ್ ಶುರುವಾಗಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ಮಾಲಾ ಮೇಲೆ ಒಂದು ಕಣ್ಣಿಟ್ಟಿದ್ದರು. ಮೊದಲಿಗೆ ಕೊಲೆ ಮಾಡಿದ ಆರೋಪಿಗಳ ಬೆನ್ನು ಬಿದ್ದು ಪ್ರಮುಖ ಆರೋಪಿ ಪೀಟರ್ ಮತ್ತು ಸೂರ್ಯನಿಗೆ ಗುಂಟೇಟು ಹೊಡೆದು, ಮತ್ತೆ ಮೂವರು ಸೇರಿದಂತೆ ಒಟ್ಟು ಐವರನ್ನು ಬಂಧಿಸಿದ್ದರು. ಈ ಐವರ ವಿಚಾರಣೆ ವೇಳೆ ರೇಖಾ ಕದಿರೇಶ್ ಕೊಲೆಯ ಹಿಂದಿನ ಮಾಸ್ಟರ್ ಮೈಂಡ್‍ಗಳು ಮಾಲ ಮತ್ತು ಮಾಲನ ಮಗ ಅರುಳ್ ಕೈವಾಡದ ಬಗ್ಗೆ ಬಾಯಿ ಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಛಲವಾದಿಪಾಳ್ಯದಲ್ಲಿ ಕದಿರೇಶ್ ಕಾರ್ಪೋರೇಟರ್ ಆಗಿದ್ದ ವೇಳೆ ಈಗ ಅರೆಸ್ಟ್ ಆಗಿರುವ ಪೀಟರ್, ಅರುಣ್, ಸೂರ್ಯ, ಸ್ಟೀಫನ್, ಪುರುಷೋತ್ತಮ ಸೇರಿದಂತೆ ಎಲ್ಲರು ಕೂಡ ಕದಿರೇಶ್ ಗೆ ತುಂಬಾ ಆಪ್ತರಾಗಿದ್ದರು. ಕದಿರೇಶ್ ಕೂಡ ಇವರನ್ನೆಲ್ಲಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದ. ಅಕ್ಕ ಮಾಲಾ ಕೂಡ ಏರಿಯಾದಲ್ಲಿ ಹವಾ ಮೆಂಟೈನ್ ಮಾಡ್ಕೊಂಡಿದ್ಳು. ಆದರೆ ಕದಿರೇಶ್ ಕೊಲೆಯಾಗಿ, ರೇಖಾ ಕಾರ್ಪೋರೇಟರ್ ಆದಾಗ ಇವರೆಲ್ಲರನ್ನೂ ದೂರ ಇಟ್ಟಿದ್ದರು. ಇದರಿಂದ ಆಕ್ರೋಶಗೊಂಡಿದ್ದ ಮಾಲಾ ಮತ್ತು ಮಗ ಅರುಳ್‍ಗೆ ಪೀಟರ್ ಸಾಥ್ ನೀಡಿದ್ದ. ರೇಖಾ ಬದುಕಿರೋ ತನಕ ನಮಗೆ ಉಳಿಗಾಲವಿಲ್ಲ. ಅವಳನ್ನ ಮುಗಿಸೋಕೆ ಪ್ಲಾನ್ ಮಾಡಿ, ಕೇಸು, ಜಾಮೀನು, ನಾವ್ ನೋಡ್ಕೋತಿವಿ ಅಂತಾ ಮಾಲ ಮತ್ತು ಮಗ ಆರುಳ್ ಹತ್ಯೆ ಗೆ ಡೀಲ್ ನೀಡಿದ್ದರು ಅಂತ ತನಿಖೆಯಲ್ಲಿ ಗೊತ್ತಾಗಿದೆ. ಇದನ್ನೂ ಓದಿ: ಸ್ವಂತ ಮಗುವನ್ನೇ ಕೊಂದು ಹೂತುಹಾಕಿದ ಪೋಷಕರು – ಮೃತದೇಹ ಹೊರತೆಗೆದು ಪರಿಶೀಲನೆ

ತಮ್ಮನ ಹೆಂಡತಿಗೆ ಸ್ಕೆಚ್ ಹಾಕಿ ಕೊಲೆ ಮಾಡಿಸಿದ್ದು ನಾದಿನಿ ಮಾಲ ಅಂತಾ ತಿಳಿದ ಸ್ಥಳೀಯರು ಶಾಕ್ ಆಗಿದ್ದಾರೆ. ಸದ್ಯ ರೇಖಾ ಕದಿರೇಶ್ ಹತ್ಯೆ ಪ್ರಕರಣ ದಲ್ಲಿ ಏಳು ಜನರ ಬಂಧನವಾಗಿದ್ದು, ಇನ್ನೂ ಯಾರ್ಯಾರು ಈ ಕೊಲೆಯ ಹಿಂದಿದ್ದಾರೆ ಅನ್ನೋದು ಪೊಲೀಸರ ತನಿಖೆಯಿಂದ ಬಹಿರಂಗವಾಗಬೇಕಿದೆ. ಇದನ್ನೂ ಓದಿ: ರೇಖಾ ಕದಿರೇಶ್ ಕೊಲೆ ಪ್ರಕರಣಕ್ಕೆ ಸ್ಫೋಟಕ ಟ್ವಿಸ್ಟ್ – ಬಯಲಾಯ್ತು ಮರ್ಡರ್ ರಹಸ್ಯ

Comments

Leave a Reply

Your email address will not be published. Required fields are marked *