ರಾಜ್ಯದ ಹವಾಮಾನ ವರದಿ 16-05-2021

Karnataka weather report

ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡಮಾರುತದ ಅಬ್ಬರ ಜೋರಾಗಿದ್ದು, ರಾಜ್ಯದ ಹಲವೆಡೆ ಬಹುತೇಕ ಮೋಡ ಕವಿದ ವಾತಾವರಣ ಇರಲಿದೆ, ಭಾರೀ ಮಳೆ ಸುರಿಯಲಿದೆ. ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಣೆ ಮಾಡಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ದಾವಣಗೆರೆ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ. ಉಳಿದಂತೆ ಕಲಬುರಗಿ ಜಿಲ್ಲೆಯಲ್ಲಿ ಗರಿಷ್ಠ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಮತ್ತು ಮಡಿಕೇರಿಯಲ್ಲಿ ಗರಿಷ್ಠ 21 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಇಂದಿನ ಗರಿಷ್ಠ ಮತ್ತು ಕನಿಷ್ಠ ಉಷ್ಣಾಂಶ ಮಾಹಿತಿ:

ಬೆಂಗಳೂರು: 27-22
ಮಂಗಳೂರು: 29-27
ಶಿವಮೊಗ್ಗ: 27-23
ಬೆಳಗಾವಿ: 24-22
ಮೈಸೂರು: 27-22

ಮಂಡ್ಯ: 27-22
ರಾಮನಗರ: 27-22
ಮಡಿಕೇರಿ: 21-18
ಹಾಸನ: 24-21
ಚಾಮರಾಜನಗರ: 28-22

ಚಿಕ್ಕಬಳ್ಳಾಪುರ: 28-22
ಕೋಲಾರ: 28-22
ತುಮಕೂರು: 27-22
ಉಡುಪಿ: 29-27
ಕಾರವಾರ: 29-27

ಚಿಕ್ಕಮಗಳೂರು: 23-20
ದಾವಣಗೆರೆ: 28-23
ಚಿತ್ರದುರ್ಗ: 28-23
ಹಾವೇರಿ: 27-23

ಗದಗ: 27-23
ಕೊಪ್ಪಳ: 29-24
ರಾಯಚೂರು: 32-26
ಯಾದಗಿರಿ: 31-26

ವಿಜಯಪುರ: 27-22
ಬೀದರ್: 31-24
ಕಲಬುರಗಿ: 32-26
ಬಾಗಲಕೋಟೆ: 29-24

Comments

Leave a Reply

Your email address will not be published. Required fields are marked *