ರಾಜ್ಯದಲ್ಲಿ ಕೊರೊನಾ ಮ’ರಣ’ ಕೇಕೆ – ಒಂದೇ ದಿನ 4,553 ಜನಕ್ಕೆ ಸೋಂಕು

– ಏಳು ಜಿಲ್ಲೆಗಳಲ್ಲಿ ಮೂರಂಕಿ ದಾಟಿದ ಕೊರೊನಾ
– ಯಾವ ಜಿಲ್ಲೆಯಲ್ಲಿ ಎಷ್ಟು? ಇಲ್ಲಿದೆ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ತನ್ನ ಕಬಂದ ಬಾಹುಗಳನ್ನ ವಿಸ್ತರಿಸಿಕೊಳ್ಳುತ್ತಿದೆ. ಇಂದು ಒಂದೇ ದಿನ 15 ಜನರನ್ನ ಬಲಿ ಪಡೆದಿದ್ದು, 4,553 ಜನಕ್ಕೆ ಸೋಂಕು ತಗುಲಿದೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸ್ಫೋಟವಾಗಿದ್ದು, 2,787 ಹೊಸ ಪ್ರಕರಣಗಳು ವರದಿಯಾಗಿದೆ.

ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 12,325ಕ್ಕೇರಿಕೆಯಾಗಿದೆ. ಸದ್ಯ ರಾಜ್ಯದಲ್ಲಿ 39,092 ಸಕ್ರಿಯ ಪ್ರಕರಣಗಳಿದ್ದು, 331 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 10 ಲಕ್ಷದ ಗಡಿ ದಾಟಿದೆ. ಇಂದು 2,060 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.3.79 ಮತ್ತು ಮರಣ ಪ್ರಮಾಣ ಶೇ.0.32 ರಷ್ಟಿದೆ. ಇಂದು ರಾಜ್ಯದಲ್ಲಿ 1,19,881 ಸ್ಯಾಂಪಲ್ ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 20, ಬಳ್ಳಾರಿ 93, ಬೆಳಗಾವಿ 52, ಬೆಂಗಳೂರು ಗ್ರಾಮಾಂತರ 155, ಬೆಂಗಳೂರು ನಗರ 2,787, ಬೀದರ್ 147, ಚಾಮರಾಜನಗರ 15, ಚಿಕ್ಕಬಳ್ಳಾಪುರ 10, ಚಿಕ್ಕಮಗಳೂರು 17, ಚಿತ್ರದುರ್ಗ 29, ದಕ್ಷಿಣ ಕನ್ನಡ 83, ದಾವಣಗೆರೆ 23, ಧಾರವಾಡ 100, ಗದಗ 18, ಹಾಸನ 104, ಹಾವೇರಿ 7, ಕಲಬುರಗಿ 170, ಕೊಡಗು 14, ಕೋಲಾರ 20, ಕೊಪ್ಪಳ 10, ಮಂಡ್ಯ 79, ಮೈಸೂರು 260, ರಾಯಚೂರು 23, ರಾಮನಗರ 18, ಶಿವಮೊಗ್ಗ 36, ತುಮಕೂರು 107, ಉಡುಪಿ 73, ಉತ್ತರ ಕನ್ನಡ 49, ವಿಜಯಪುರ 16 ಮತ್ತು ಯಾದಗಿರಿಯಲ್ಲಿ 18 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Comments

Leave a Reply

Your email address will not be published. Required fields are marked *