ರಾಜ್ಯದಲ್ಲಿ ಇಂದು 8,364 ಮಂದಿಗೆ ಕೊರೊನಾ- 114 ಮಂದಿ ಸಾವು

– 10815 ಮಂದಿ ಡಿಸ್ಚಾರ್ಜ್

ಬೆಂಗಳೂರು: ರಾಜ್ಯದಲ್ಲಿ ಮಹಾಮಾರಿ ಕೊರೊನಾ ತನ್ನ ಆರ್ಭಟವನ್ನು ಮುಂದುವರಿಸಿದ್ದು, ಇಂದು 8,364 ಮಂದಿಯಲ್ಲಿ ಕೊರೊನಾ ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 5,11,346ಕ್ಕೆ ಏರಿಕೆಯಾಗಿದೆ.

ಇಂದು ಆರೋಗ್ಯ ಇಲಾಖೆ ಬಿಡುಗಡೆ ಮಾಡಿರುವ ಹೆಲ್ತ್ ಬುಲೆಟಿನ್ ಪ್ರಕಾರ, 114 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಇಲ್ಲಿಯವರೆಗೆ 7,922 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಇಂದು ರಾಜ್ಯದಲ್ಲಿ 10,815 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. 5,11,346 ಸೋಂಕಿತರ ಪೈಕಿ 98,564 ಸಕ್ರಿಯ ಪ್ರಕರಣಗಳಾಗಿದ್ದು, ಆಸ್ಪತ್ರೆಯಿಂದ 4,04,841 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಒಟ್ಟು 822 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದು 28,822 ಮಂದಿಯ ರ‍್ಯಾಪಿಡ್‌ ಟೆಸ್ಟ್ ನಲ್ಲಿ 34,962 ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು, ಒಟ್ಟು 63,784 ಮಂದಿಗೆ ಪರೀಕ್ಷೆ ಮಾಡಲಾಗಿದೆ. ಒಟ್ಟು 14,54,954 ಮಂದಿಗೆ ರ‍್ಯಾಪಿಡ್‌ ಟೆಸ್ಟ್, 27,24,613 ಮಂದಿಗೆ ಆರ್ ಟಿ ಪಿಸಿಆರ್ ಮತ್ತು ಇತರೇ ಪರೀಕ್ಷೆ ಮಾಡಿದ್ದು ಒಟ್ಟು ಕರ್ನಾಟಕದಲ್ಲಿ 41,79,567 ಮಂದಿಗೆ ಕೊರೊನಾ ಪರೀಕ್ಷೆ ಮಾಡಲಾಗಿದೆ.

ಬೆಂಗಳೂರಿನಲ್ಲಿ ಇಂದು 3,733 ಮಂದಿಗೆ ಸೋಂಕು ದೃಢವಾಗಿದ್ದು, 33 ಮಂದಿ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,91,438ಕ್ಕೆ ಏರಿಕೆ ಆಗಿದೆ. ಬಳ್ಳಾರಿ 300, ದಕ್ಷಿಣ ಕ್ನನಡ 432, ಧಾರವಾಡ 264, ಗದಗ 391, ಮೈಸೂರು 626, ಉಡುಪಿ 215 ಮಂದಿಯಲ್ಲಿ ಇಂದು ಸೋಂಕು ಪತ್ತೆಯಾಗಿದೆ.

ಬಾಗಲಕೋಟೆ 54, ಬಳ್ಳಾರಿ 215, ಬೆಳಗಾವಿ 272, ಬೆಂಗಳೂರು ಗ್ರಾಮಾಂತರ 91, ಬೆಂಗಳೂರು ನಗರ 4,180, ಬೀದರ್ 122, ಚಾಮರಾಜನಗರ 97, ಚಿಕ್ಕಬಳ್ಳಾಪುರ 95, ಚಿಕ್ಕಮಗಳೂರು 145, ಚಿತ್ರದುರ್ಗ 263, ದಕ್ಷಿಣ ಕನ್ನಡ 404, ದಾವಣಗೆರೆ 132, ಧಾರವಾಡ 277, ಗದಗ 259, ಹಾಸನ 599, ಹಾವೇರಿ 79, ಕಲಬುರಗಿ 352, ಕೊಡಗು 34, ಕೋಲಾರ 97, ಕೊಪ್ಪಳ 275, ಮಂಡ್ಯ 412, ಮೈಸೂರು 1018, ರಾಯಚೂರು 139, ರಾಮನಗರ 44, ಶಿವಮೊಗ್ಗ 144, ತುಮಕೂರು 113, ಉಡುಪಿ 310, ಉತ್ತರ ಕನ್ನಡ 407, ವಿಜಯಪುರ 84, ಯಾದಗಿರಿ 102 ಮಂದಿ ಇಂದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Comments

Leave a Reply

Your email address will not be published. Required fields are marked *