ರಾಜ್ಯದಲ್ಲಿ ಇಂದು 47,563 ಮಂದಿಗೆ ಕೊರೊನಾ – ಸಾವಿನ ಸಂಖ್ಯೆ 482 ಏರಿಕೆ

– ಬೆಂಗ್ಳೂರಲ್ಲಿ 21,534 ಮಂದಿಗೆ ಸೋಂಕು, 285 ಬಲಿ

ಬೆಂಗಳೂರು: ರಾಜ್ಯದಲ್ಲಿ ಇಂದು ಕೂಡ ಕೊರೊನಾ ಮಹಾಬ್ಲಾಸ್ಟ್ ಆಗಿದ್ದು, 47,563 ಕೋವಿಡ್ 19 ಪಾಸಿಟಿವ್ ಕಾಣಿಸಿಕೊಂಡಿದೆ. ಅಲ್ಲದೆ ಸಾವಿನ ಸಂಖ್ಯೆಯಲ್ಲೂ ಏರಿಕೆ ಕಂಡಿದ್ದು, ಜನರಲ್ಲಿ ಆತಂಕ ಹುಟ್ಟಿಸಿದೆ.

ಇಂದು ಬರೋಬ್ಬರಿ 47,563 ಮಂದಿಗೆ ಸೋಂಕು ತಗುಲಿದ್ದು, 482 ಸೋಂಕಿತರು ಬಲಿಯಾಗಿದ್ದಾರೆ. ಬೆಂಗಳೂರಿನಲ್ಲಿ ಇಂದು 21,534 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, 285 ಮಂದಿ ಮಹಾಮಾರಿಗೆ ಬಲಿಯಾಗಿದ್ದಾರೆ.


ಇಂದು 34,881 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 18,86,448ಕ್ಕೆ ಏರಿಕೆ ಕಂಡಿದೆ. ರಾಜ್ಯದಲ್ಲಿ ಇಂದು 482 ಮಂದಿ ಕೊರೊನಾಗೆ ಬಲಿಯಾಗಿದ್ದು, ಈ ಮೂಲಕ ಮೃತರ ಸಂಖ್ಯೆ 18,286 ಏರಿಕೆ ಕಂಡಿದೆ. ಕೋವಿಡ್-19 ಸೋಂಕಿನ ಖಚಿತ ಪ್ರಮಾಣ ಶೇ.30.28 ಮತ್ತು ಮರಣ ಪ್ರಮಾಣ ಶೇ.1.01ರಷ್ಟಿದೆ. ರಾಜ್ಯದಲ್ಲಿ 5,36,64 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಮುಂದುವರಿದಿದೆ.

ಇಂದು ಒಟ್ಟು 1,57,027 ಸ್ಯಾಂಪಲ್ (ರಾಪಿಡ್ 10441+ಆರ್ ಟಿಪಿಸಿಆರ್ 1,46,586) ಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇಂದು ತುಮಕೂರು ಮತ್ತು ಮೈಸೂರಿನಲ್ಲಿ 2 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ವರದಿಯಾಗಿವೆ.

ಆರೋಗ್ಯ ಇಲಾಖೆಯ ಬುಲೆಟಿನ್ ಪ್ರಕಾರ, ಬಾಗಲಕೋಟೆ 1563, ಬಳ್ಳಾರಿ 940, ಬೆಳಗಾವಿ 991, ಬೆಂಗಳೂರು ಗ್ರಾಮಾಂತರ 958ಬೆಂಗಳೂರು ನಗರ 21534 ಬೀದರ್ 311, ಚಾಮರಾಜನಗರ 691, ಚಿಕ್ಕಬಳ್ಳಾಪುರ 711, ಚಿಕ್ಕಮಗಳೂರು 356, ಚಿತ್ರದುರ್ಗ 116, ದಕ್ಷಿಣ ಕನ್ನಡ 1,513 ದಾವಣಗೆರೆ 538, ಧಾರವಾಡ 323, ಗದಗ 341, ಹಾಸನ 996 ಹಾವೇರಿ 169, ಕಲಬುರಗಿ 1,661 ಕೊಡಗು 765, ಕೋಲಾರ 903, ಕೊಪ್ಪಳ600, ಮಂಡ್ಯ 1,225, ಮೈಸೂರು 2,294, ರಾಯಚೂರು 894, ರಾಮನಗರ 407, ಶಿವಮೊಗ್ಗ 547, ತುಮಕೂರು 2,419 ಉಡುಪಿ 1,043 , ಉತ್ತರ ಕನ್ನಡ 1,034 , ವಿಜಯಪುರ525 ಮತ್ತು ಯಾದಗಿರಿಯಲ್ಲಿ 718 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ.

Comments

Leave a Reply

Your email address will not be published. Required fields are marked *