ಯುವಜನತೆ ನಿರುದ್ಯೋಗ ಮುಕ್ತವಾಗಲು ಕೌಶಲ್ಯಾಭಿವೃದ್ಧಿ ಅಗತ್ಯ: ರವಿ.ಡಿ ಚನ್ನಣ್ಣವರ್

ಚಿತ್ರದುರ್ಗ: ವಿದ್ಯೆ ಕೌಶಲ್ಯಾಭಿವೃದ್ಧಿಗೆ ಪೂರಕವಾಗಿರಬೇಕು, ಯುವಕರು ನಿರುದ್ಯೋಗದಿಂದ ಮುಕ್ತರಾಗಲು ಕೌಶಲ್ಯಾಭಿವೃದ್ದಿ ಅಗತ್ಯವೆಂದು ಸಿ.ಐ.ಡಿ ಎಸ್.ಪಿ. ರವಿ.ಡಿ ಚನ್ನಣ್ಣನವರ್ ಅಭಿಪ್ರಾಯಪಟ್ಟಿದ್ದಾರೆ.

ಕೋಟೆನಾಡು ಚಿತ್ರದುರ್ಗದ ಭೋವಿಗುರುಪೀಠದ ಪೀಠಾಧ್ಯಾಕ್ಷರಾದ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರ ದರ್ಶನ ಪಡೆದು ಬಳಿಕ ಮಾತನಾಡಿದ ರವಿ.ಡಿ ಚನ್ನಣ್ಣನವರ್, ವಿದ್ಯೆ ಕೌಶಲ್ಯಾಭಿವೃದ್ಧಿಗೆ ತಕ್ಕಂತೆ ಇರಬೇಕು. ಕೌಶಲ್ಯತೆಯನ್ನು ಯುವಕರು ಹೇಗೆ ಬಳಸಬೇಕು ಎಂಬುದನ್ನು ಅರಿತಾಗ ಮಾತ್ರ ಬದುಕಲ್ಲಿ ಯಶಸ್ವಿಯಾಗಲು ಸಾಧ್ಯ. ಅಲ್ಲದೇ ಬದುಕಿನಲ್ಲಿ ಕ್ರಿಯಾಶೀಲತೆಯಿಂದ ಸೃಜನಶೀಲತೆ ಹುಟ್ಟಿದಾಗ ಮಾತ್ರ ರಾಷ್ಟ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಯುವಕರಿಗೆ ಮನವರಿಕೆ ಮಾಡಿಕೊಟ್ಟರು. ಇದನ್ನೂ ಓದಿ: ಡಿಕೆಶಿ ಹೊಡೆದಿದ್ದು ಕಾಂಗ್ರೆಸ್ ಅಲ್ಲ, ಜೆಡಿಎಸ್ ಕಾರ್ಯಕರ್ತನಿಗೆ


ಯುವಕರಿಗೆ ಬದುಕಿನ ಭರವಸೆ ಮುಖ್ಯ, ಅವರು ಪರಾವಲಂಬಿಯಾಗಿರಬಾರದು, ಉದ್ಯೋಗದಲ್ಲಾಗಲೀ, ಬದುಕಿನಲ್ಲಾಗಲೀ, ಸ್ವಾವಲಂಬಿಯಾಗಿ ಬದುಕಬೇಕು. ರಾಷ್ಟ್ರದ ಅಭಿವೃದ್ಧಿಯೊಟ್ಟಿಗೆ ಸಮಾಜದ ಅಭಿವೃದ್ಧಿಯು ಸಹ ಮುಖ್ಯವಾಗಿರುತ್ತದೆ. ಹಾಗಾಗಿ ಯುವಕರು ತಮ್ಮ ಮೇಲಿರುವ ಬಹುದೊಡ್ಡ ಜವಾಬ್ದಾರಿಯನ್ನು ಅರಿತು ಬದುಕಿನ ಹೆಜ್ಜೆಗಳನ್ನು ಇಡಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಭೋವಿ ಗುರುಪೀಠದ ಪೀಠಾಧ್ಯಕ್ಷರಾದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ, ಸಿಒಓ ಗೋವಿಂದಪ್ಪ, ಮುಖಂಡರಾದ ಲಕ್ಷ್ಮಣ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *