ಯತ್ನಾಳ್ ಬಾಣಕ್ಕೆ ಸಿಎಂ ಶಾಕ್ – ಪಂಚಮಸಾಲಿ ಧರ್ಮ ಸಂಕಟದಲ್ಲಿ ಬಿಎಸ್‍ವೈ

ಬೆಂಗಳೂರು: ಪಂಚಮಸಾಲಿ ಧರ್ಮ ಸಂಕಟದಲ್ಲಿ ಸಿಲುಕಿರುವ ಸಿಎಂ ಬಿ.ಎಸ್.ಯಡಿಯೂರಪ್ಪ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಟ್ಟ ಬಾಣಕ್ಕೆ ಶಾಕ್ ಆಗಿದ್ದಾರೆ.

ಬೃಹತ್ ಸಮಾವೇಶಕ್ಕೆ ಸರ್ಕಾರದ ಪರವಾಗಿ ಆಗಮಿಸಿದ ಸಚಿವ ಮುರುಗೇಶ್ ನಿರಾಣಿ ಮತ್ತು ಸಿ.ಸಿ.ಪಾಟೀಲ್ ಸ್ವಾಮೀಜಿಗಳ ಮನವೊಲಿಸಲು ಮುಂದಾದರು. ಆದ್ರೆ ಸಚಿವರ ಭರವಸೆ ಹೊರತಾಗಿಯೂ ಮುಂದಿನ ತೀರ್ಮಾನ ತೆಗೆದುಕೊಳ್ಳಲು ಜಯ ಮೃತ್ಯುಂಜಯ ಸ್ವಾಮೀಜಿಗಳು ಯತ್ನಾಳ್ ಅವರಿಗೆ ಬಿಟ್ಟರು. ಈ ವೇಳೆ ಪ್ರತಿಭಟನಾನಿರತರ ಜೊತೆ ಮಾತನಾಡಿದ ಯತ್ನಾಳ್, ಯಾವ ಕಾರಣಕ್ಕೂ ಪ್ರತಿಭಟನೆ ಕೈ ಬಿಡುವುದು ಬೇಡ. ಬೇಕಾದರೆ ಹೋರಾಟ ಬೆಂಬಲಿಸಿ ಸಿಸಿ ಪಾಟೀಲ್ ಹಾಗೂ ನಿರಾಣಿ ರಾಜೀನಾಮೆ ಕೊಡಲಿ ಎಂದು ಹೊಸ ದಾಳ ಉರುಳಿಸಿದರು.

ಪ್ರತಿಭಟನೆ ಆರಂಭವಾದಾಗಿನಿಂದಲೂ ಪಾದಯಾತ್ರೆ ತಡೆಯಲು ದಾವಣಗೆರೆ, ಹರಿಹರ, ಚಿತ್ರದುರ್ಗ ಮತ್ತು ತುಮಕೂರಿನಲ್ಲಿ ಪ್ರಯತ್ನಿಸಲಾಯ್ತು. ಇದೀಗ ಸಂತೆಗೆ ಬಂದ ಇಬ್ಬರು ವಾಪಾಸ್ ಹೋದವರು. ಈ ಹೋರಾಟಕ್ಕೆ ಒಳ್ಳೆಯ ಪ್ರತಿಫಲ ಸಿಗಲಿದೆ ಎಂದರು.

ಯತ್ನಾಳ್ ಹೊಸ ದಾಳ ಉರುಳಿಸುತ್ತಿದ್ದಂತೆ ಸಚಿವರು ವೇದಿಕೆಯಿಂದ ವಾಪಾಸ್ ಆದರು. ಮಾರ್ಚ್ 4ರಿಂದ ವಿಧಾನ ಮಂಡಲ ಅದಿವೇಶನದವರೆಗೆ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸಲಾಗುವುದು. ಮಾರ್ಚ್ 4ರೊಳಗೆ 2ಎ ಮೀಸಲಾತಿ ಘೋಷಿಸದಿದ್ದರೆ ಅಮರಣಾವಂತ ಉಪವಾಸಕ್ಕೆ ಮುಂದಾಗಿದ್ದಾರೆ.

Comments

Leave a Reply

Your email address will not be published. Required fields are marked *