ಮೋಜಿಗಾಗಿ ಸಮುದ್ರಕ್ಕಿಳಿದ- ಪ್ರಾಣ ಉಳಿಸಲು ಹೋಗಿ ಬೆಂಗಳೂರಿನ ಮೂವರು ಗೋಕರ್ಣದಲ್ಲಿ ಸಮುದ್ರಪಾಲು

– ಇಬ್ಬರನ್ನು ರಕ್ಷಿಸಿದ ಮೀನುಗಾರರು

ಕಾರವಾರ: ಸಮುದ್ರದಲ್ಲಿ ಆಟವಾಡುತಿದ್ದ ಪ್ರವಾಸಿಗರಲ್ಲಿ ಮೂರು ಜನ ಅಲೆಗೆ ಸಿಲುಕಿ ಸಾವು ಕಂಡು, ಇಬ್ಬರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದ ಮುಖ್ಯ ಕಡಲತೀರದಲ್ಲಿ ನಡೆದಿದೆ.

 

ಬೆಂಗಳೂರಿನಿಂದ ಇಂದು 16 ಜನ ದೇವರ ದರ್ಶನ ಪಡೆಯಲು ಗೋಕರ್ಣಕ್ಕೆ ಆಗಮಿಸಿದ್ದರು. ಊಟ ಮಾಡಿ ದೇವರ ದರ್ಶನ ಪಡೆಯಲು ಹೊರಟವರಲ್ಲಿ ತಿಪ್ಪೇಶ್ ಎಂಬ ಯುವಕ ಮೋಜಿಗಾಗಿ ಸಮುದ್ರಕ್ಕಿಳಿದಿದ್ದ. ಈ ವೇಳೆ ಯುವಕ ಸೇರಿ ಆತನನ್ನು ರಕ್ಷಿಸಲು ತೆರಳಿದ್ದ ಇಬ್ಬರು ನೀರು ಪಾಲಾಗಿದ್ದಾರೆ.

ಈ ವೇಳೆ ಅಲೆಯ ಅಬ್ಬರ ಆತನನ್ನು ನೀರಿನ ಒಳಕ್ಕೆ ಸೆಳೆದಿದೆ. ಇದನ್ನು ಗಮನಿಸಿದ ಯುವತಿ ಸುಮಾ ಆತನ ರಕ್ಷಣೆಗಾಗಿ ಧಾವಿಸಿದ್ದಾಳೆ. ಆದರೆ ಆಕೆಯೂ ಅಲೆಯ ಹೊಡೆತಕ್ಕೆ ನೀರುಪಾಲಾಗಿದ್ದು, ಬಳಿಕ ರವಿ ಹಾಗೂ ಈತನೊಂದಿಗಿದ್ದ ರತ್ನಮ್ಮ, ಪವಿತ್ರ ಇವರನ್ನು ರಕ್ಷಿಸಲು ಧಾವಿಸಿದ್ದಾರೆ ದುರಾದೃಷ್ಟವಶಾತ್ ರವಿ ಕೂಡ ನೀರು ಪಾಲಾಗಿದ್ದು, ಪವಿತ್ರ ಹಾಗೂ ರತ್ನಮ್ಮ ಅವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *