ಮೇಲೂರು ಶಾಲೆಯ ಮಕ್ಕಳಿಗೆ ಪಬ್ಲಿಕ್ ಟಿವಿ ಫ್ರೀ ಟ್ಯಾಬ್ ವಿತರಣೆ

ಚಿಕ್ಕಬಳ್ಳಾಪುರ: ಪಬ್ಲಿಕ್ ಟಿವಿ, ರೋಟರಿ ಕ್ಲಬ್‌ ಜ್ಞಾನದೀವಿಗೆ ಮಹಾಯಜ್ಞ ಮುಂದುವರಿದಿದ್ದು, ಇಂದು ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮೇಲೂರು ಗ್ರಾಮದ ಗಂಗಾದೇವಿ ಸರ್ಕಾರಿ ಪ್ರೌಢ ಶಾಲೆಯ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಟ್ಯಾಬ್ ವಿತರಿಸಲಾಯಿತು.

ಜಯಪ್ರಕಾಶ್ ನಾರಾಯಣಗೌಡ, ಎಚ್ ಡಿ ದೇವೇಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಸೆವೆನ್ ಹಿಲ್ಸ್ ಎಂಟರ್ ಪ್ರೈಸರ್ಸ್ ಮಾಲೀಕ ಅದೇ ಶಾಲೆಯ ಹಳೆಯ ವಿದ್ಯಾರ್ಥಿ ಕಾಕಚೊಕ್ಕಂಡಹಳ್ಳಿ ಗ್ರಾಮದ ವೆಂಕಟಮೂರ್ತಿ ಎಂಬುವವರು ಶಾಲೆಯ ಕನ್ನಡ ಮಾಧ್ಯಮದ 44 ವಿದ್ಯಾರ್ಥಿಗಳಿಗೆ ಇಂದು 22 ಟ್ಯಾಬ್ ವಿತರಿಸಿದರು.

ಇಂಗ್ಲೀಷ್ ಮಾಧ್ಯಮದ 27 ಮಂದಿ ವಿದ್ಯಾರ್ಥಿಗಳಿದ್ದು ಪಬ್ಲಿಕ್ ಟಿವಿ ವತಿಯಿಂದ ಈ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಿಸಲಾಗುವುದು. ಟ್ಯಾಬ್ ಪಡೆದ ವಿದ್ಯಾರ್ಥಿಗಳು ಪಬ್ಲಿಕ್ ಟಿವಿಗೆ ಹಾಗೂ ರೋಟರಿ ಕ್ಲ್‌ಬ್‌ಗೆ ಧನ್ಯವಾದಗಳನ್ನು ಅರ್ಪಿಸಿದರು.

Comments

Leave a Reply

Your email address will not be published. Required fields are marked *