ಮೂವರು ಯುವಕರಿಂದ ವಿಷ ಸೇವನೆ- ಇಬ್ಬರ ಸಾವು

-ಮತ್ತೋರ್ವನ ಸ್ಥಿತಿ ಗಂಭೀರ
-ಒಂದೇ ಏರಿಯಾದ ನಿವಾಸಿಗಳು

ಚಂಡೀಗಢ: ಒಂದೇ ಏರಿಯಾದ ಮೂವರು ವಿಷ ಸೇವಿಸಿರುವ ಘಟನೆ ಹರಿಯಾಣದ ಕೇಮಲಾ ಗ್ರಾಮದಲ್ಲಿ ನಡೆದಿದೆ. ಮೂವರಲ್ಲಿ ಇಬ್ಬರು ಸಾವನ್ನಪ್ಪಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ.

21 ವರ್ಷದ ಅಕ್ಷಯ್ ಮತ್ತು 18 ವರ್ಷದ ಯಶ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಶುಭಮ್ (18)ನನ್ನು ಕಲ್ಪನಾ ಚಾವ್ಲಾ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮರಣೋತ್ತರ ಶವ ಪರೀಕ್ಷೆ ಬಳಿಕ ಅಕ್ಷಯ್ ಮತ್ತು ಯಶ್ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.

ಸಾಂದರ್ಭಿಕ ಚಿತ್ರ

ಮೂವರು ವಿಷ ಸೇವಿಸಿರುದಾಗಿ ಹೇಳಿದ ಕೂಡಲೇ ಪೋಷಕರು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೂವರ ಸ್ಥಿತಿ ಗಂಭೀರವಾಗಿದ್ದರಿಂದ ಕಲ್ಪನಾ ಚಾವ್ಲಾ ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸೂಚಿಸಿದರು. ಮಾರ್ಗ ಮಧ್ಯೆಯೇ ಅಕ್ಷಯ್ ಮತ್ತು ಯಶ್ ಸಾವನ್ನಪ್ಪಿದ್ರು. ಶುಭಮ್ ನಿಗೆ ಚಿಕಿತ್ಸೆ ಮುಂದುವರಿದಿದೆ. ಅಕ್ಷಯ್ ಬಿಎ, ಯಶ್ 12ನೇ ತರಗತಿಯಲ್ಲಿ ಓದುತ್ತಿದ್ದನು. ಮೂವರು ವಿಷ ಸೇವಿಸಿದ್ಯಾಕೆ ಎಂಬುವುದು ಗೊತ್ತಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಯಶ್ ತಂದೆ ಕೃಷ್ಣಕುಮಾರ್, ಪುತ್ರ ಅಕ್ಷಯ್ ಮನೆಗೆ ಹೋಗಿದ್ದನು. ಅಲ್ಲಿ ಇಬ್ಬರು ತಾವು ವಿಷ ಸೇವಿಸಿದ್ದೇವೆ, ನಮ್ಮನ್ನು ಬದುಕಿಸಿಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತಾ ಪ್ರಜ್ಞೆ ತಪ್ಪಿದ್ದರು. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ರು. ಆದ್ರೆ ವಿಷ ಯಾಕೆ ಸೇವಿಸಿದ್ರು ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ ಎಂದು ಭಾವುಕರಾಗುತ್ತಾರೆ.

Comments

Leave a Reply

Your email address will not be published. Required fields are marked *