ಮೂರು ಗಂಟೆ ಆಕ್ಸಿಜನ್ ಇಲ್ಲದೇ ನರಳಿ ನರಳಿ ಪ್ರಾಣ ಬಿಟ್ಟ ನಾಲ್ವರು

– ಕಲಬುರಗಿಯಲ್ಲಿ ಮತ್ತೊಂದು ಆಕ್ಸಿಜನ್ ದುರಂತ
– ಸಂಬಂಧಿಕರ ಗೋಳಾಟ ಕೇಳೋರೆ ಇಲ್ಲ

ಕಲಬುರಗಿ: ಮೂರು ಗಂಟೆ ಪ್ರಾಣವಾಯು ಇಲ್ಲದೇ ನಾಲ್ವರು ನರಳಿ ನರಳಿ ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆ ಕಲಬುರಗಿಯ ಅಫಜಲಪುರ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.

ಇಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿತ್ತು. ಆದ್ರೆ ಇದುವರೆಗೂ ತಾಲೂಕಾಸ್ಪತ್ರೆಗೆ ಆಕ್ಸಿಜನ್ ಪೂರೈಕೆ ಆಗಿಲ್ಲ. ಆದ್ರೆ ಇಷ್ಟೆಲ್ಲ ಆದ್ರೂ ಕಲಬುರಗಿ ಜಿಲ್ಲಾಡಳಿತ ಮಾತ್ರ ಜಾಣ ಮೌನಕ್ಕೆ ಶರಣಾಗಿದೆ. 35 ರೋಗಿಗಳು ದಾಖಲಾಗಿರುವ ಅಫಜಲಪುರ ಆಸ್ಪತ್ರೆಯ ಪರಿಸ್ಥಿತಿ ಕ್ಷಣದಿಂದ ಕ್ಷಣಕ್ಕೆ ಬಿಗಡಾಯಿಸುತ್ತಿದೆ. ರೋಗಿಗಳನ್ನು ಸಾವನ್ನಪ್ಪುತ್ತಿದ್ದಂತೆ ಮೃತದೇಹಗಳನ್ನ ಟೆಂಪೋಗಳಲ್ಲಿ ರವಾನಿಸಲಾಗಿದೆ.

ನನ್ನ ಪತಿಗೆ ಯಾರು ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಬೇರೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲ ಅಂತ ಹೇಳಿದ್ರು. ನಮಗೆ ಈ ಆಸ್ಪತ್ರೆ ಮತ್ತು ಸರ್ಕಾರದ ಸಹವಾಸವೇ ಸಾಕು ಎಂದು ಮೃತ ವ್ಯಕ್ತಿಯ ಪತ್ನಿ ಕಣ್ಣೀರು ಹಾಕಿದರು. ಕಲಬುರಗಿಯಲ್ಲಿರುವ ಆಕ್ಸಿಜನ್ ಪ್ಲಾಂಟ್ ಗಳು ದುಬಾರಿ ಬೆಲೆಗೆ ಮಾರಾಟಕ್ಕೆ ಮುಂದಾಗಿದ್ದು, ನೆರೆಯ ಮಹಾರಾಷ್ಟ್ರಕ್ಕೆ ಆಕ್ಸಿಜನ್ ಪೂರೈಸುತ್ತಿವೆ ಎಂಬ ಆರೋಪಗಳು ಕೇಳಿ ಬಂದಿವೆ.

ಭಾನುವಾರ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದ 24 ಜನರು ಸಾವನ್ನಪ್ಪಿದ್ದರು. ಇದುವರೆಗೂ ರಾಜ್ಯದಲ್ಲಿ ಆಕ್ಸಿಜನ್ ಇಲ್ಲದೇ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

Comments

Leave a Reply

Your email address will not be published. Required fields are marked *