ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನ ಕೊಂದ ಮಕ್ಕಳು

-ಬ್ಯಾಟ್, ಸ್ಟಂಪ್ ಗಳಿಂದ ಹಲ್ಲೆ
-ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಅಂಕಲ್

ಲಕ್ನೋ: ಮೀನೂಟಕ್ಕೆ ಕರೆಯದ ಚಿಕ್ಕಪ್ಪನನ್ನು ಮಕ್ಕಳು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ ವಾರಾಣಸಿಯ ಸಿಕರೌಲಿ ಗ್ರಾಮದಲ್ಲಿ ನಡೆದಿದೆ. ಸೆಪ್ಟೆಂಬರ್ 18ರಂದು ಹಲ್ಲೆ ನಡೆಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಗಾಯಾಳು ಮೃತಪಟ್ಟಿದ್ದಾರೆ.

30 ವರ್ಷದ ತುಷಾರ್ ಕಾಂತ್ ಉರ್ಫ್ ಸೋನು ಸೋದರರ ಮಕ್ಕಳಿಂದಲೇ ಕೊಲೆಯಾದ ವ್ಯಕ್ತಿ. ನಾಲ್ವರು ಸೋದರರಲ್ಲಿ ತುಷಾರ್ ಕೊನೆಯವರು. ಸೆಪ್ಟೆಂಬರ್ 18ರಂದು ಮೀನಿನ ಖಾದ್ಯ ತಂದಿದ್ದ ತುಷಾರ್, ಹಿರಿಯ ಸೋದರನ ಜೊತೆ ಮನೆಯ ಮೇಲೆ ಕುಳಿತಿ ತಿನ್ನುತ್ತಿದ್ದರು. ನಮಗೆ ಊಟಕ್ಕೆ ಕರೆದಿಲ್ಲ ಎಂದು ಇನ್ನಿಬ್ಬರ ಸೋದರನ ಮಕ್ಕಳು ಬ್ಯಾಟ್, ಸ್ಟಂಪ್ ಗಳಿಂದ ಚಿಕ್ಕಪ್ಪನ ಮೇಲೆ ಹಲ್ಲೆ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ತುಷಾರ್ ಹಿರಿಯ ಸೋದರ ಪೊಲೀಸರಿಗೆ ಮಾಹಿತಿ ನೀಡಿ, ತಮ್ಮನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.

ತುಷಾರ್ ಆರೋಗ್ಯ ಗಂಭೀರವಾದ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಬಿಹೆಚ್‍ಯು ಟ್ರಾಮ್ ಸೆಂಟರ್ ನಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ತುಷಾರ್ ಭಾನುವಾರ ನಿಧನರಾಗಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದು, ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *