ಮಿರ್ಜಾಪುರ ವೆಬ್ ಸಿರೀಸ್ ನೋಡಿ ನಿಕಿತಾ ಕೊಲೆ

– ಹೆದ್ದಾರಿಯಲ್ಲಿ ಬೃಹತ್ ಪ್ರತಿಭಟನೆ

ಚಂಡೀಗಢ: ಮಿರ್ಜಾಪುರ ವೆಬ್ ಸಿರೀಸ್ ನೋಡಿಯೇ ನಿಕಿತಾ ತೋಮರ್ ಕೊಲೆ ಮಾಡಿರೋದಾಗಿ ಆರೋಪಿ ತೌಶಿಪ್ ತಪ್ಪೊಪ್ಪಿಕೊಂಡಿದ್ದಾನೆ.

ಮಿರ್ಜಾಪುರ ಮೊದಲ ಆವೃತ್ತಿಯಲ್ಲಿಯಂತೆ ನಿಕಿತಾ ಕೊಲೆಗೆ ಆರೋಪಿಗಳು ಪ್ಲಾನ್ ಮಾಡಿಕೊಂಡಿದ್ದರು ಎಂದು ವರದಿಯಾಗಿದೆ. ಅದೇ ರೀತಿ ಸೋಮವಾರ ಪರೀಕ್ಷೆ ಬರೆದು ಹೊರ ಬಂದ ತೌಶಿಫ್ ಗುಂಡು ಹೊಡೆದು ಕೊಲೆಗೈದು ಎಸ್ಕೇಪ್ ಆಗಿದ್ದನು. ಗುಂಡಿಟ್ಟು ಕೊಲ್ಲುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಮಿರ್ಜಾಪುರದಲ್ಲಿ ಮುನ್ನಾ ಭಾಯಿ ಪಾತ್ರದಾರಿ ಸ್ವೀಟಿಯನ್ನ ಪ್ರೀತಿಸುತ್ತಿರುತ್ತಾನೆ. ಆದ್ರೆ ಮುನ್ನಾನ ಪ್ರೀತಿ ತಿರಸ್ಕರಿದ ಸ್ವೀಟಿ, ತಾನು ಮೆಚ್ಚಿದ ಗುಡ್ಡು ಪಂಡಿತ್ ನನ್ನು ಮದುವೆ ಆಗುತ್ತಾನೆ. ಒನ್ ಸೈಡ್ ಲವ್ ನಲ್ಲಿದ್ದ ಮುನ್ನಾಬಾಯಿ ಸ್ವೀಟಿಗೆ ಗುಂಡಿಟ್ಟು ಕೊಲ್ಲುತ್ತಾನೆ. ನಾನು ಆಕೆಯನ್ನ ಪ್ರೀತಿಸದಕ್ಕೆ ಕೊಲೆ ಮಾಡಿರೋದಾಗಿ ಮುನ್ನಾ ಹೇಳುತ್ತಾನೆ. ಆರೋಪಿಗಳ ಇದೇ ವೆಬ್ ಸಿರೀಸ್ ನೋಡಿ ಕೊಲೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಆರೋಪಿ ಪೊಲೀಸರ ಮುಂದೆ ಹೇಳಿದ್ದಾನೆ. ಇದನ್ನೂ ಓದಿ: ಯುವತಿ ಕೊಲೆ ಪ್ರಕರಣಕ್ಕೆ ಟ್ವಿಸ್ಟ್- ಮತಾಂತರಕ್ಕೆ ಒಪ್ಪದ್ದಕ್ಕೆ ಕೊಲೆ, ಲವ್ ಜಿಹಾದ್ ಎಂದ ಪೋಷಕರು

ಫರೀದಾಬಾದ್ ಜಿಲ್ಲೆಯ ಬಲ್ಲಭಗಢ ನಲ್ಲಿ ಸೋಮವಾರ ಕಾಲೇಜಿನಿಂದ ಗೆಳತಿ ಜೊತೆ ಹೊರ ಬಂದ ನಿಕಿತಾಳ ಅಪಹರಣಕ್ಕೆ ತೌಶಿಫ್ ಮತ್ತು ಆತನ ಗೆಳೆಯರು ಮುಂದಾಗಿದ್ದರು. ಬಲವಂತವಾಗಿ ಆಕೆಯನ್ನ ಮದುವೆಯಾಗಲು ಆರೋಪಿ ತೀರ್ಮಾನಿಸಿದ್ದನು. ಆದ್ರೆ ಕಾರ್ ನಲ್ಲಿ ಬರಲು ನಿಕಿತಾ ಪ್ರತಿರೋಧ ವ್ಯಕ್ತಪಡಿಸಿದ್ದಾಗ ಶೂಟ್ ಮಾಡಿ ಕೊಂದಿದ್ದರು. ಬಂಧಿತ ತೌಶಿಫ್ ಕಾಂಗ್ರೆಸ್ ಶಾಸಕ ಅಫ್ತಾಬ್ ಅಹ್ಮದ್ ಸೋದರ ಸಂಬಂಧಿಯಾಗಿದ್ದಾನೆ.

ಇನ್ನು ಪ್ರಕರಣದ ತನಿಖೆ ನಡೆಸುತ್ತಿರೋ ಎಸ್‍ಐಟಿ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿತ್ತು. ಈ ವೇಳೆ ಸ್ಥಳಕ್ಕಾಗಮಿಸಿದ ರಾಜಕೀಯ ಮುಖಂಡರು ಸೇರಿದಂತೆ ಸಾರ್ವಜನಿಕರು ನ್ಯಾಯಕ್ಕಾಗಿ ಆಗ್ರಹಿಸಿದರು. ಕೆಲ ಸಂಘಟನೆಗಳು ಕಾಂಗ್ರೆಸ್ ಮತ್ತು ಬಿಜೆಪಿ ನಿಕಿತಾ ಕೊಲೆ ಪ್ರಕರಣವನ್ನ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಮುಂದಾಗಿದೆ ಎಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಹೆದ್ದಾರಿಯ ಪಕ್ಕದಲ್ಲಿ ಹೋಟೆಲ್, ಅಂಗಡಿ ಮುಂಗಟ್ಟುಗಳನ್ನ ಬಲವಂತವಾಗಿ ಬಂದ್ ಮಾಡಿಸಲಾಗಿದೆ. ಇದನ್ನೂ ಓದಿ: ಪರೀಕ್ಷೆ ಮುಗಿಸಿ ಹೊರಬರುತ್ತಿದ್ದಂತೆಯೇ ಗುಂಡಿಕ್ಕಿ ಯುವತಿಯ ಕೊಲೆ

 

Comments

Leave a Reply

Your email address will not be published. Required fields are marked *