ಮಾಡೋಕೆ ಕೆಲಸ ಇಲ್ಲವಾ?: ಸೌಮ್ಯಾ ರೆಡ್ಡಿ

ಬೆಂಗಳೂರು: ಮಾಡೋಕೆ ಏನೂ ಕೆಲಸ ಇಲ್ವಾ? ಹೆಣ್ಣು ಮಗಳಿಗೆ ಅನ್ಯಾಯ ಆಗಿದೆ ಅಂತ ನಾವು ಪ್ರತಿಭಟನೆ ಮಾಡ್ತಾ ಇರೋದು ಎಂದು ಸುಧಾಕರ್ ಅವರ ಹೇಳಿಕೆ ವಿಚಾರವಾಗಿ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ತಿರುಗೇಟು ಕೊಟ್ಟಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಹಿಳೆಗೆ ಕೆಲಸ ಕೋಡಿಸುತ್ತೇನೆ ಎಂದು ಹೇಳಿ ಮಿಸ್ ಯೂಸ್ ಮಾಡಿಕೊಂಡಿದ್ದಾರೆ. ಈ ಕುರಿತಾಗಿ ನಾವು ಹೋರಾಟ ಮಾಡುತ್ತಿರುವುದು. ನಾವು ಚರ್ಚೆ ಮಡುತ್ತಿರುವುದನ್ನು ನೋಡಿ ಜನರು ನಗುತ್ತಿದ್ದಾರೆ. ನಾವು ಯಾಕೆ ಪ್ರತಿಭಟನೆ ಮಾಡ್ತಾ ಇದ್ದೇವೆ ಅಂತ ಅರ್ಥ ಮಾಡ್ಕೊಳ್ಳಲಿ. ಯಾರೇ ಆಗಲಿ ಸಿಬಿಐಗೆ ಹೋಗಲಿ ಎಂದಿದ್ದಾರೆ.

ರಾಜ್ಯದಲ್ಲಿ ಸದ್ಯ ಒಂದೆಂಡ್ತಿ ರಾಜಕಾರಣ ನಡೆಯುತ್ತಿದೆ. ಸುಧಾಕರ್ ಅವರು ನೀಡಿರುವ ಹೇಳಿಕೆಯಿಂದ ಇಂದು ರಾಜ್ಯ ರಾಜ್ಯಕಾರಣದಲ್ಲಿ ಈ ಬಗ್ಗೆ ಚರ್ಚೆ ಆರಂಭವಾಗಿದೆ. ಆರೋಗ್ಯ ಸಚಿವರ ಈ ಹೇಳಿಕೆಗೆ ಜಯನಗರದ ಶಾಸಕಿ ಸೌಮ್ಯಾ ರೆಡ್ಡಿ ಕಿಡಿಕಾರಿದ್ದಾರೆ.

ಒಬ್ಬರ ಪರ್ಸನಲ್ ವಿಚಾರಕ್ಕಾಗಿ ನಾವು ಪ್ರತಿಭಟನೆ ಮಾಡ್ತಾ ಇಲ್ಲ. ಹೆಣ್ಣು ಮಗಳಿಗೆ ಅನ್ಯಾಯವಾಗಿದೆ ಎಂದು ಹೇಳುತ್ತಿದ್ದೇವೆ. ಸಿಬಿಐಗೆ ಈ ಪ್ರಕರಣವನ್ನು ಕಳುಹಿಸಿ. ಯಾಕೆ ಕೋರ್ಟ್ ಹೋಗಿ ಇನ್‍ಂಜೆಕ್ಷನ್ ತಗೊಂಡಿರೋದು. ತನಿಖೆಯನ್ನು ಯಾಕೆ ಮಾಡುತ್ತಿಲ್ಲ. ಇವರಿಗೆ ಯಾಕೆ ಭಯವಾಗಿದೆ. ಬಡ ಮಹಿಳಗೆ  ಅನ್ಯಾಯವಾಗಿದ್ದು, ಈ ವಿಚಾರಕ್ಕೆ ನ್ಯಾಯ ಕೊಡಿಸಲಿ ಎಂದು ಹೇಳಿದ್ದಾರೆ. ಸುಧಾಕರ್ ನೀಡುರುವ ಹೇಳಿಕೆ ವಿಚಾರವಾಗಿ ಚರ್ಚೆ ಮಾಡಲು ನಾವು ವಿಧಾನ ಸೌಧದಲ್ಲಿ ನಿಂತಿದ್ದೇವೆ ಎನ್ನುತ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *