ಮನೆಯಲ್ಲಿ ನೀರಿಲ್ಲ, ನೀರು ತರಲು ಬಿಡ್ತಿಲ್ಲ – ಯುವಕನ ಅಳಲು

ಚಾಮರಾಜನಗರ: ನಮ್ಮ ತಂದೆಗೆ ಒಂದು ವಾರದ ಹಿಂದೆ ಕೊರೊನಾ ಪಾಸಿಟಿವ್ ದೃಢವಾಗಿದೆ. ನೀರು ತರಲು ಹೊರಗೆ ಹೋದರೆ ನೆರೆಯವರು ಬಿಡುತ್ತಿಲ್ಲ ಎಂದು ಸೋಂಕಿತನ ಮಗ ಅಳಲು ತೋಡಿಕೊಂಡಿದ್ದಾರೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ದಿನ್ನಳ್ಳಿ ಗ್ರಾಮದ ನಿವಾಸಿಯಾಗಿರುವ ಚಂದ್ರು ಎಂಬವರು, ಒಂದು ವಾರದ ಹಿಂದೆ ಕೊರೊನಾ ಪರೀಕ್ಷೆ ಮಾಡಿಸಲಾಗಿತ್ತು. ಈ ವೇಳೆ ನಮ್ಮ ತಂದೆ ಮಹಾದೇವ ನಾಯಕರಿಗೆ ಪಾಸಿಟಿವ್ ಬಂದಿದ್ದು, ಹೋಂ ಐಸೋಲೇಷನ್‍ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ನೆರೆಯವರು ನೀರು ತೆಗೆದುಕೊಳ್ಳಲೂ ನಲ್ಲಿಯ ಬಳಿ ಸೇರಿಸುತ್ತಿಲ್ಲ ಎಂದು ಚಂದ್ರುರವರು ವೀಡಿಯೋ ಮಾಡುವ ಮೂಲಕ ಬೇಸರ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಬಂದು ಒಂದು ವಾರವಾಯ್ತು ಇಲ್ಲಿಯವರೆಗೂ ಆರೋಗ್ಯ ಅಧಿಕಾರಿಗಳಾಗಲಿ, ಆಶಾ ಕಾರ್ಯಕರ್ತರಾಗಲಿ ನಮ್ಮ ಮನೆಗೆ ಭೇಟಿ ಕೊಟ್ಟಿಲ್ಲ. ಆರೋಗ್ಯದ ಬಗ್ಗೆ ವಿಚಾರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಕೊರೊನಾದಿಂದ ಈ ಕುಟುಂಬದವರು ನೀರು ಕುಡಿಯಲು ಕೂಡ ಕಷ್ಟಪಡುವಂತಾಗಿದೆ. ಇದನ್ನು ಓದಿ: ಮಂಗಳಮುಖಿಯರಿಗೆ ಪಡಿತರ, ಮೆಡಿಕಲ್ ಕಿಟ್ ವಿತರಣೆ

Comments

Leave a Reply

Your email address will not be published. Required fields are marked *