ಮದ್ವೆಯಾದ ಮೊದಲ ರಾತ್ರಿಯೇ ತಾನು ಯಾವುದಕ್ಕೂ ಉಪಯೋಗವಿಲ್ಲದವನೆಂದ ವರ- ವಧು ಕಂಗಾಲು

ಹೈದರಾಬಾದ್: ಮದುವೆಯಾದ ಮೊದಲ ರಾತ್ರಿಯೇ ವರನ ಮಾತು ಕೇಳಿ ವಧು ಕಂಗಾಲಾದ ಘಟನೆ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ ನಡೆದಿರುವುದಾಗಿ ಬೆಳಕಿಗೆ ಬಂದಿದೆ.

ತೆನಾಲಿ ಮೂಲದ ಎಂಡಿ ಜಲಾಲುದ್ದೀನ್ ಹಾಗೂ ಕೌಸರ್ ಜಾನ್ ದಂಪತಿಯ ಮಗಳಿಗೆ ವಿಜಯವಾಡದ ಆಟೋನಗರ ಮೂಲದ ಖಜಖಾನ್ ಗೆ ಮದುವೆ ನಿಶ್ಚಯವಾಗಿತ್ತು. ಅಂತೆಯೇ ಇವರಿಬ್ಬರ ವಿವಾಹ ಸಮಾರಂಭ ಏಪ್ರಿಲ್ 4ರಂದು ತೆನಾಲಿಯ ಪಾಂಡುರಂಗ ಪೇಟಾದಲ್ಲಿ ಅದ್ಧೂರಿಯಾಗಿ ನಡೆಯಿತು. ಆದರೆ ಪತಿ ಮೇಲೆ ಹಲವು ಭರವಸೆಗಳನ್ನು ಇಟ್ಟುಕೊಂಡಿದ್ದ ಯುವತಿಗೆ ಮಾತ್ರ ಆಘಾತ ಕಾದಿತ್ತು.

ಮದುವೆ ಬಳಿಕ ಕೆನಾಡಾಗೆ ಹೋಗುವುದಾಗಿ ವರನು ವಧು ಬಳಿ ಹೇಳಿದ್ದನು. ಈ ಹಿನ್ನೆಲೆಯಲ್ಲಿ ವಧು ಕೂಡ ಕೆನಡಾ ಕನಸು ಹೊತ್ತಿದ್ದಳು. ಆದರೆ ಮದುವೆ ಬಳಿಕ ಆಗಿದ್ದೇ ಬೇರೆ. ಮೊದಲ ರಾತ್ರಿಯೇ ವರನ ಮಾತು ಕೇಳಿ ವಧು ದಂಗಾಗಿ ಹೋಗಿದ್ದಾಳೆ. ನಾನು ಯಾವುದಕ್ಕೂ ಉಪಯೋಗವಿಲ್ಲದವನು ಎಂದು ವರ ಹೇಳಿದ್ದು, ವಧು ಶಾಕ್ ಆಗಿದ್ದಾಳೆ. ಇದನ್ನೂ ಓದಿ: ಹುಡುಗಿಯ ಹೊಟ್ಟೆಯಲ್ಲಿದ್ದ 2 ಕೆಜಿ ಕೂದಲನ್ನು ಹೊರತೆಗೆದ ವೈದ್ಯರು..!

ವರನ ಮಾತು ಕೇಳಿ ಏನೂ ತೋಚದಾದ ವಧು ಕೂಡಲೇ ಈ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ್ದಾಳೆ. ಅಲ್ಲದೆ ಪೋಷಕರ ಜೊತೆಗೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾಳೆ. ಸದ್ಯ ವರನ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.  ಇದನ್ನೂ ಓದಿ: ಗೋಲ್‍ಗಪ್ಪಾದಲ್ಲಿ ರಿಂಗ್ ಇಟ್ಟು ಪ್ರಿಯತಮೆಗೆ ಪ್ರಪೋಸ್ ಮಾಡಿದ ಯುವಕ..!

Comments

Leave a Reply

Your email address will not be published. Required fields are marked *