ಮದುವೆ ಕಾರ್ಡ್ ಮೇಲೆ ಲಾಲು ಪ್ರಸಾದ್ ಫೋಟೋ ಹಾಕಿಸಿದ ಅಭಿಮಾನಿ

ಪಾಟ್ನಾ: ಬಿಹಾರದ ವೈಶಾಕಿ ಜಿಲ್ಲೆಯ ವರನೋರ್ವ ತನ್ನ ಮದುವೆಯ ಕಾರ್ಡ್ ಮೇಲೆ ಲಾಲು ಪ್ರಸಾದ್ ಯಾದವ್ ಫೋಟೋವನ್ನು ಮುದ್ರಿಸುವ ಮೂಲಕ ಆರ್‌ಜೆಡಿ ಮುಖ್ಯಸ್ಥನ ಮೇಲಿರುವ ಪ್ರೀತಿ ಹಾಗೂ ನಿಷ್ಠೆಯನ್ನು ತೋರಿಸಿದ್ದಾರೆ. ಅಲ್ಲದೆ ಆರ್‌ಜೆಡಿಯು ಪಕ್ಷದ ಚಿಹ್ನೆ ಜೊತೆಗೆ ಲಾಲು ಯಾದವ್‍ನನ್ನು ಬಿಡುಗಡೆಗೊಳಿಸುವಂತೆ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ.

ಹೌದು, ವೈಶಾಲಿಯ ರಾಹುವಾ ಗ್ರಾಮದ ನಿವಾಸಿಯಾಗಿರುವ ಪವನ್ ಕುಮಾರ್ ಏಪ್ರಿಲ್ 23ರಂದು ವಿವಾಹವಾಗಲಿದ್ದಾರೆ. ಹಾಗಾಗಿ ತಮ್ಮ ಮದುವೆ ಆಹ್ವಾನ ಪತ್ರಿಕೆಯನ್ನು ಆರ್‌ಜೆಡಿ  ಮುಖ್ಯಸ್ಥ ಲಾಲು ಪ್ರಸಾದ್ ಅವರ ಪುತ್ರ ಲಾಲು ಪ್ರಸಾದ್ ತೇಜಸ್ವಿ ಯಾದವ್, ಮಾಜಿ ಮುಖ್ಯಮಂತ್ರಿ ರಾಬ್ರಿ ದೇವಿ, ಮಾಜಿ ಆರೋಗ್ಯ ಸಚಿವ ತೇಜ್ ಮಗ ಪವನ್, ಪ್ರತಾಪ್ ಯಾದವ್ ರಾಜ್ಯ ಅಧ್ಯಕ್ಷ ಜಗದಾನಂದ್ ಸಿಂಗ್ ಸೇರಿದಂತೆ ಆರ್‍ಜೆಡಿ ಪ್ರಮುಖ ನಾಯಕರಿಗೆ ಆಹ್ವಾನ ಪತ್ರಿಕೆಯನ್ನು ಕಳುಹಿಸಿಕೊಟ್ಟಿದ್ದಾರೆ.

ಲಾಲು ಪ್ರಸಾದ್ ಬಡಕುಟುಂಬದಿಂದ ಬಂದಿದ್ದಾರೆ. ನನಗೆ ಉನ್ನತ ಅಧಿಕಾರಿಗಳೊಂದಿಗೆ ಯಾವುದೇ ಸಂಬಂಧವಿಲ್ಲ. ಹೀಗಾಗಿ ಅವರನ್ನು ಬಿಡುಗಡೆಗೊಳಿಸುವ ಉದ್ದೇಶದಿಂದ ಈ ಮಾರ್ಗವನ್ನು ಆರಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಲಾಲು ಪ್ರಸಾದ್ ಖಂಡಿತವಾಗಿ ಶೀಘ್ರವೇ ಬಿಡುಗಡೆಯಾಗುತ್ತಾರೆ ಮತ್ತು ಆರೋಗ್ಯವಾಗಿರುತ್ತಾರೆ ಎಂದು ಭರವಸೆ ಹೊಂದಿದ್ದಾರೆ. ಜೊತೆಗೆ ತಮ್ಮ ಮದುವೆಗೆ ಲಾಲು ಪ್ರಸಾದ್ ಹಾಗೂ ಅವರ ಇಡೀ ಕುಟುಂಬ ಆಗಮಿಸಿ ಆಶೀರ್ವದಿಸುತ್ತಾರೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

Comments

Leave a Reply

Your email address will not be published. Required fields are marked *